<p><strong>ಬಂಗಾರಪೇಟೆ:</strong> ಈ ಬಾರಿ ತಾಲ್ಲೂಕಿನಾದ್ಯಂತ ಹುಣಸೆ ಮರಗಳು ಮೈದುಂಬಿ ಹೂವು ಬಿಟ್ಟಿದ್ದು, ಹಳ್ಳಿಗಳ ರಸ್ತೆ ಬದಿ ಹಾಗೂ ತೋಟಗಳಲ್ಲಿನ ಹುಣಸೆ ಮರಗಳು ಹೂವಿನಿಂದ ಕಂಗೊಳಿಸುತ್ತಿವೆ. ಹಾಗಾಗಿ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.</p>.<p>ತಾಲ್ಲೂಕು ಮೂಲತಃ ಒಣ ಹವಾಮಾನ ಮತ್ತು ಕೆಂಪು ಮಿಶ್ರಿತ ಮಣ್ಣಿನ ಗುಣಲಕ್ಷಣಗಳಿಗೆ ಹೆಸರಾಗಿದೆ. ಈ ವಿಶಿಷ್ಟ ಭೌಗೋಳಿಕ ಲಕ್ಷಣಗಳು ಹುಣಸೆ ಬೆಳೆಗೆ ಹೆಚ್ಚು ಪೂರಕ. ಕಳೆದ ವರ್ಷಕ್ಕಿಂತ ಈ ಬಾರಿ ಮಳೆಯ ಹಂಚಿಕೆ ಮತ್ತು ಹವಾಮಾನದ ಏರುಪೇರುಗಳು ಹುಣಸೆ ಹೂ ಬಿಡಲು ಪೂರಕವಾಗಿ ಪರಿಣಮಿಸಿವೆ.</p>.<p>ತಾಲ್ಲೂಕಿನ ಪ್ರಮುಖ ಗ್ರಾಮಗಳಾದ ಬೂದಿಕೋಟೆ, ಕಾಮಸಮುದ್ರ, ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರತಿಯೊಂದು ಹುಣಸೆ ಮರವೂ ಹೂವಿನಿಂದ ಕಂಗೊಳಿಸುತ್ತಿವೆ. ಗಡಿ ಭಾಗದ ರೈತರಿಗೆ ಹುಣಸೆ ಪ್ರಮುಖ ಆದಾಯದ ಮೂಲ. ಈ ಬಾರಿ ಉತ್ತಮ ಹೂವು ಬಿಟ್ಟಿದ್ದು, ಉತ್ತಮ ಬೆಲೆ ಸಿಗುವ ಭರವಸೆ ಮೂಡಿಸಿದೆ.</p>.<p>ಹೂವು ಸಮೃದ್ಧವಾಗಿರುವುದರಿಂದ ಜೇನುನೊಣಗಳ ಚಟುವಟಿಕೆ ಹೆಚ್ಚಾಗಿದ್ದು, ಇದು ಪರಾಗಸ್ಪರ್ಶ ಪ್ರಕ್ರಿಯೆಗೆ ಪೂರಕವಾಗಿದೆ. ಇದರಿಂದ ಕಾಯಿ ಕಟ್ಟುವ ಪ್ರಮಾಣವೂ ಹೆಚ್ಚಾಗಲಿದೆ ಎಂಬುದು ಕೃಷಿಕರ ನಂಬಿಕೆ. ಈ ಭಾಗದ ಅನೇಕ ಕುಟುಂಬಗಳು ಹುಣಸೆ ಹಣ್ಣನ್ನು ಸುಲಿಯುವ ಮತ್ತು ಸಂಸ್ಕರಿಸುವ ಕಾಯಕವನ್ನೇ ನಂಬಿಕೊಂಡಿವೆ. ಹಳ್ಳಿಗಳಲ್ಲಿ ಹೂವು ತುಂಬಿರುವುದು ಈ ಕಾರ್ಮಿಕ ವರ್ಗದವರಲ್ಲೂ ಹೊಸ ಆಶಾವಾದ ಮೂಡಿಸಿದೆ. ಹುಣಸೆ ಹಣ್ಣು ತನ್ನ ವಿಶಿಷ್ಟ ರುಚಿ ಮತ್ತು ಬಾಳಿಕೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಮಾರುಕಟ್ಟೆಗಳಿಗೂ ಇಲ್ಲಿಂದ ಹುಣಸೆ ರಫ್ತಾಗುತ್ತದೆ.</p>.<p>ಕಳೆದ ಎರಡು ವರ್ಷಗಳಿಂದ ಸರಿಯಾಗಿ ಹೂವು ಹಿಡಿಯದೆ ನಷ್ಟ ಅನುಭವಿಸಿದ್ದೆವು. ಆದರೆ ಈ ಬಾರಿ ಮರಗಳು ಹೂವಿನಿಂದ ತುಂಬಿರುವುದನ್ನು ನೋಡಿದರೆ, ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವ ಲಕ್ಷಣ ಕಾಣುತ್ತಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.</p>.<p>ಇಳುವರಿ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುವ ಸಂಭವವಿರುತ್ತದೆ. ಆದ್ದರಿಂದ ಸರ್ಕಾರ ಅಥವಾ ಮಾರುಕಟ್ಟೆ ಸಮಿತಿಗಳು ನಮಗೆ ಉತ್ತಮ ದರ ಸಿಗುವಂತೆ ನೋಡಿಕೊಳ್ಳಬೇಕೆಂಬುದು ಬೋಪ್ಪನಹಳ್ಳಿ ರೈತ ನಾರಾಯಣಪ್ಪ ಅವರ ಮಾತಾಗಿದೆ.</p>.<p>ಹುಣಸೆ ಮರಗಳಿಗೆ ಹೆಚ್ಚಿನ ಆರೈಕೆ ಅಥವಾ ಬಂಡವಾಳದ ಅಗತ್ಯವಿರುವುದಿಲ್ಲ. ಪ್ರಕೃತಿ ಕೃಪೆ ತೋರಿದರೆ ಸಾಕು, ಇದು ನಮಗೆ ಬೋನಸ್ ಆದಾಯದಂತೆ ಬರುತ್ತದೆ. ಈ ಬಾರಿ ಹೂವಿನ ಪ್ರಮಾಣ ನೋಡಿದರೆ ಖಂಡಿತ ಉತ್ತಮ ಲಾಭ ಸಿಗುವ ಭರವಸೆ ಇದೆ ಎಂಬುದು ಹುಣಸೆ ಬೆಳೆಗಾರ ದೊಡ್ಡೇರಿ ರವಿ ಕುಮಾರ್ ಅವರ ಮಾತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ:</strong> ಈ ಬಾರಿ ತಾಲ್ಲೂಕಿನಾದ್ಯಂತ ಹುಣಸೆ ಮರಗಳು ಮೈದುಂಬಿ ಹೂವು ಬಿಟ್ಟಿದ್ದು, ಹಳ್ಳಿಗಳ ರಸ್ತೆ ಬದಿ ಹಾಗೂ ತೋಟಗಳಲ್ಲಿನ ಹುಣಸೆ ಮರಗಳು ಹೂವಿನಿಂದ ಕಂಗೊಳಿಸುತ್ತಿವೆ. ಹಾಗಾಗಿ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.</p>.<p>ತಾಲ್ಲೂಕು ಮೂಲತಃ ಒಣ ಹವಾಮಾನ ಮತ್ತು ಕೆಂಪು ಮಿಶ್ರಿತ ಮಣ್ಣಿನ ಗುಣಲಕ್ಷಣಗಳಿಗೆ ಹೆಸರಾಗಿದೆ. ಈ ವಿಶಿಷ್ಟ ಭೌಗೋಳಿಕ ಲಕ್ಷಣಗಳು ಹುಣಸೆ ಬೆಳೆಗೆ ಹೆಚ್ಚು ಪೂರಕ. ಕಳೆದ ವರ್ಷಕ್ಕಿಂತ ಈ ಬಾರಿ ಮಳೆಯ ಹಂಚಿಕೆ ಮತ್ತು ಹವಾಮಾನದ ಏರುಪೇರುಗಳು ಹುಣಸೆ ಹೂ ಬಿಡಲು ಪೂರಕವಾಗಿ ಪರಿಣಮಿಸಿವೆ.</p>.<p>ತಾಲ್ಲೂಕಿನ ಪ್ರಮುಖ ಗ್ರಾಮಗಳಾದ ಬೂದಿಕೋಟೆ, ಕಾಮಸಮುದ್ರ, ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರತಿಯೊಂದು ಹುಣಸೆ ಮರವೂ ಹೂವಿನಿಂದ ಕಂಗೊಳಿಸುತ್ತಿವೆ. ಗಡಿ ಭಾಗದ ರೈತರಿಗೆ ಹುಣಸೆ ಪ್ರಮುಖ ಆದಾಯದ ಮೂಲ. ಈ ಬಾರಿ ಉತ್ತಮ ಹೂವು ಬಿಟ್ಟಿದ್ದು, ಉತ್ತಮ ಬೆಲೆ ಸಿಗುವ ಭರವಸೆ ಮೂಡಿಸಿದೆ.</p>.<p>ಹೂವು ಸಮೃದ್ಧವಾಗಿರುವುದರಿಂದ ಜೇನುನೊಣಗಳ ಚಟುವಟಿಕೆ ಹೆಚ್ಚಾಗಿದ್ದು, ಇದು ಪರಾಗಸ್ಪರ್ಶ ಪ್ರಕ್ರಿಯೆಗೆ ಪೂರಕವಾಗಿದೆ. ಇದರಿಂದ ಕಾಯಿ ಕಟ್ಟುವ ಪ್ರಮಾಣವೂ ಹೆಚ್ಚಾಗಲಿದೆ ಎಂಬುದು ಕೃಷಿಕರ ನಂಬಿಕೆ. ಈ ಭಾಗದ ಅನೇಕ ಕುಟುಂಬಗಳು ಹುಣಸೆ ಹಣ್ಣನ್ನು ಸುಲಿಯುವ ಮತ್ತು ಸಂಸ್ಕರಿಸುವ ಕಾಯಕವನ್ನೇ ನಂಬಿಕೊಂಡಿವೆ. ಹಳ್ಳಿಗಳಲ್ಲಿ ಹೂವು ತುಂಬಿರುವುದು ಈ ಕಾರ್ಮಿಕ ವರ್ಗದವರಲ್ಲೂ ಹೊಸ ಆಶಾವಾದ ಮೂಡಿಸಿದೆ. ಹುಣಸೆ ಹಣ್ಣು ತನ್ನ ವಿಶಿಷ್ಟ ರುಚಿ ಮತ್ತು ಬಾಳಿಕೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಮಾರುಕಟ್ಟೆಗಳಿಗೂ ಇಲ್ಲಿಂದ ಹುಣಸೆ ರಫ್ತಾಗುತ್ತದೆ.</p>.<p>ಕಳೆದ ಎರಡು ವರ್ಷಗಳಿಂದ ಸರಿಯಾಗಿ ಹೂವು ಹಿಡಿಯದೆ ನಷ್ಟ ಅನುಭವಿಸಿದ್ದೆವು. ಆದರೆ ಈ ಬಾರಿ ಮರಗಳು ಹೂವಿನಿಂದ ತುಂಬಿರುವುದನ್ನು ನೋಡಿದರೆ, ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವ ಲಕ್ಷಣ ಕಾಣುತ್ತಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.</p>.<p>ಇಳುವರಿ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುವ ಸಂಭವವಿರುತ್ತದೆ. ಆದ್ದರಿಂದ ಸರ್ಕಾರ ಅಥವಾ ಮಾರುಕಟ್ಟೆ ಸಮಿತಿಗಳು ನಮಗೆ ಉತ್ತಮ ದರ ಸಿಗುವಂತೆ ನೋಡಿಕೊಳ್ಳಬೇಕೆಂಬುದು ಬೋಪ್ಪನಹಳ್ಳಿ ರೈತ ನಾರಾಯಣಪ್ಪ ಅವರ ಮಾತಾಗಿದೆ.</p>.<p>ಹುಣಸೆ ಮರಗಳಿಗೆ ಹೆಚ್ಚಿನ ಆರೈಕೆ ಅಥವಾ ಬಂಡವಾಳದ ಅಗತ್ಯವಿರುವುದಿಲ್ಲ. ಪ್ರಕೃತಿ ಕೃಪೆ ತೋರಿದರೆ ಸಾಕು, ಇದು ನಮಗೆ ಬೋನಸ್ ಆದಾಯದಂತೆ ಬರುತ್ತದೆ. ಈ ಬಾರಿ ಹೂವಿನ ಪ್ರಮಾಣ ನೋಡಿದರೆ ಖಂಡಿತ ಉತ್ತಮ ಲಾಭ ಸಿಗುವ ಭರವಸೆ ಇದೆ ಎಂಬುದು ಹುಣಸೆ ಬೆಳೆಗಾರ ದೊಡ್ಡೇರಿ ರವಿ ಕುಮಾರ್ ಅವರ ಮಾತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>