<p>ಬೇತಮಂಗಲ: ಇಲ್ಲಿನ ಪ್ರಸಿದ್ಧ ಕರಗ ಮಹೋತ್ಸವವು ಭಕ್ತಿ ಮತ್ತು ಸಡಗರದೊಂದಿಗೆ ಜರುಗಿತು. ಹಲವು ದಿನಗಳಿಂದ ನಡೆಯುತ್ತಿದ್ದ ಈ ಧಾರ್ಮಿಕ ಉತ್ಸವಕ್ಕೆ ಸೋಮವಾರ ನಡೆದ ವಸಂತೋತ್ಸವದೊಂದಿಗೆ ವಿದ್ಯುಕ್ತ ತೆರೆ ಕಂಡಿತು.</p>.<p>ಸೋಮವಾರ ಸಂಜೆ 4 ಕ್ಕೆ ನಡೆದ ಒನಕೆ ಕರಗ ಮಹೋತ್ಸವ ಪ್ರಮುಖ ಆಕರ್ಷಣೆಯಾಗಿತ್ತು. ಕರಗ ಪೂಜಾರಿ ಕೃಷ್ಣಮೂರ್ತಿ ಅವರು ತಲೆಯ ಮೇಲೆ ಒನಕೆ ಹೊತ್ತು, ತಮಟೆ ಮತ್ತು ಮೇಳಗಳ ಶಬ್ದಕ್ಕೆ ಅದ್ಭುತವಾಗಿ ನೃತ್ಯ ಪ್ರದರ್ಶಿಸಿದರು.</p>.<p>ಭಾನುವಾರ ರಾತ್ರಿ ಪೋತಲರಾಜು ಗಾವು ಸೇವೆ ಅದ್ದೂರಿಯಾಗಿ ನಡೆಯಿತು. ಗಾವು ಸೇವೆ ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.</p>.<p>ಧ್ವಜಾರೋಹಣ ಮೂಲಕ ಚಾಲನೆಗೊಂಡ ಕರಗ, ಹಸಿ ಕರಗ, ದೀಪೋತ್ಸವ ಹಾಗೂ ವಸಂತೋತ್ಸವದೊಂದಿಗೆ ವಿದ್ಯುಕ್ತ ತೆರೆ ಕಂಡಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-18-1734397346</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇತಮಂಗಲ: ಇಲ್ಲಿನ ಪ್ರಸಿದ್ಧ ಕರಗ ಮಹೋತ್ಸವವು ಭಕ್ತಿ ಮತ್ತು ಸಡಗರದೊಂದಿಗೆ ಜರುಗಿತು. ಹಲವು ದಿನಗಳಿಂದ ನಡೆಯುತ್ತಿದ್ದ ಈ ಧಾರ್ಮಿಕ ಉತ್ಸವಕ್ಕೆ ಸೋಮವಾರ ನಡೆದ ವಸಂತೋತ್ಸವದೊಂದಿಗೆ ವಿದ್ಯುಕ್ತ ತೆರೆ ಕಂಡಿತು.</p>.<p>ಸೋಮವಾರ ಸಂಜೆ 4 ಕ್ಕೆ ನಡೆದ ಒನಕೆ ಕರಗ ಮಹೋತ್ಸವ ಪ್ರಮುಖ ಆಕರ್ಷಣೆಯಾಗಿತ್ತು. ಕರಗ ಪೂಜಾರಿ ಕೃಷ್ಣಮೂರ್ತಿ ಅವರು ತಲೆಯ ಮೇಲೆ ಒನಕೆ ಹೊತ್ತು, ತಮಟೆ ಮತ್ತು ಮೇಳಗಳ ಶಬ್ದಕ್ಕೆ ಅದ್ಭುತವಾಗಿ ನೃತ್ಯ ಪ್ರದರ್ಶಿಸಿದರು.</p>.<p>ಭಾನುವಾರ ರಾತ್ರಿ ಪೋತಲರಾಜು ಗಾವು ಸೇವೆ ಅದ್ದೂರಿಯಾಗಿ ನಡೆಯಿತು. ಗಾವು ಸೇವೆ ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.</p>.<p>ಧ್ವಜಾರೋಹಣ ಮೂಲಕ ಚಾಲನೆಗೊಂಡ ಕರಗ, ಹಸಿ ಕರಗ, ದೀಪೋತ್ಸವ ಹಾಗೂ ವಸಂತೋತ್ಸವದೊಂದಿಗೆ ವಿದ್ಯುಕ್ತ ತೆರೆ ಕಂಡಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-18-1734397346</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>