ಅರಣ್ಯ ನಾಡಿನ ಉಸಿರು. ಕಾಳ್ಗಿಚ್ಚು ತಡೆಗಟ್ಟಲು ಇಲಾಖೆಯು ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಿದೆ. ಸಾರ್ವಜನಿಕರು ಮತ್ತು ಅರಣ್ಯ ಅಂಚಿನ ನಿವಾಸಿಗಳು ಬೆಂಕಿ ಹಚ್ಚುವವರ ವಿರುದ್ಧ ನಿಗಾ ಇಡಬೇಕು. ಇಲಾಖೆಯೊಂದಿಗೆ ಕೈಜೋಡಿಸಿ
– ನಾಗೇಶ್, ಉಪ ವಲಯ ಅರಣ್ಯಾಧಿಕಾರಿ
ಕಾಳ್ಗಿಚ್ಚು ಕೇವಲ ಮರಗಳನ್ನು ಸುಡುವುದಿಲ್ಲ. ಅದು ಇಡೀ ಜೀವವೈವಿಧ್ಯವನ್ನು ನಾಶಪಡಿಸುತ್ತದೆ. ಹಾಗಾಗಿ ಇಲಾಖೆ ಐದು ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ಬಾರಿ ಕಾಳ್ಗಿಚ್ಚು ತಡೆಗೆ ತಂತ್ರಗಾರಿಕೆ ರೂಪಿಸಿದ್ದೇವೆ.