<p><strong>ಕೋಲಾರ:</strong> ಅನಾರೋಗ್ಯದಿಂದ ಬಳಲುತ್ತಿರುವ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ‘ಲಕ್ಷ್ಮಿ’ ಜಿಲ್ಲೆಯ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಲಕ್ಷ್ಮಿಪುರ ಅರಣ್ಯ ವಲಯದಲ್ಲಿರುವ ‘ಆನೆಗಳ ಆರೈಕೆ ಕೇಂದ್ರ’ಕ್ಕೆ ಬುಧವಾರ ಬಂದಿಳಿಯಿತು.</p>.<p>ಆನೆಯ ಮಾವುತ ರಾಜಣ್ಣ, ಅವರ ಮೊಮ್ಮಗ ಭುವನ್, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಮಂಜುನಾಥ್ ಸಹಿತ ನಾಲ್ಕಾರು ಮಂದಿ ಆನೆ ಜೊತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿದರು. ಆನೆಯನ್ನು ಚಿಕಿತ್ಸೆಗಾಗಿ ಇಲ್ಲಿಗೆ ಕರೆತರಲಾಗಿದೆ. ಮೂರು ತಿಂಗಳು ಇಲ್ಲಿ ಇರಲಿದ್ದು, ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.</p>.<p>ಸುಮಾರು 12 ಗಂಟೆ ಪ್ರಯಾಣ ಮಾಡಿ ಬಸವಳಿದಿದ್ದ ಆನೆಗೆ ಸ್ನಾನ ಮಾಡಿಸಲಾಯಿತು. ಬಳಿಕ ದೇವರ ಪ್ರಸಾದ ಹಚ್ಚಿ, ಬಿಸಿಲಿನ ಝಳ ತಗ್ಗಿಸುವ ನಿಟ್ಟಿನಲ್ಲಿ ಕಲ್ಲಂಗಡಿ ಹಣ್ಣು ಸಹಿತ ಅದಕ್ಕೆ ಇಷ್ಟವಾದ ಆಹಾರ ನೀಡಲಾಯಿತು.</p>.<p>‘ಕೆಲವು ದಿನ ಆನೆಯ ಜತೆಗೆ ಇದ್ದು ಊರಿಗೆ ಹೋಗುತ್ತೇನೆ. ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ತನಕ ಆನೆಯ ಜತೆ ಇರಬೇಕಾಗುತ್ತದೆ’ ಎಂದು ಮಾವುತ ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>36 ವರ್ಷದ ಈ ಹೆಣ್ಣಾನೆಯನ್ನು ನಸುಕಿನಲ್ಲೇ ಲಾರಿಗೆ ಹತ್ತಿಸಲಾಗಿತ್ತು. ಆ ಭಾಗದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಇಲ್ಲದ ಕಾರಣ ಕೋಲಾರಕ್ಕೆ ಕರೆತರಲಾಗಿದೆ.</p>.<p>ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ವಸಂತ ವೈಭವ ಜಾನಪದ ಕಲಾಜಾಥಾದ ವೇಳೆ ಜಂಬೂಸವಾರಿ ನಡೆಯುತ್ತದೆ. ಲಕ್ಷ್ಮಿ ಆನೆಯು ಭುವನೇಶ್ವರಿಯನ್ನು ಒಳಗೊಂಡ ಅಂಬಾರಿ ಹೊತ್ತು ಸಾಗುತ್ತದೆ.</p>.<p>20 ಎಕರೆ ಪ್ರದೇಶ: ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಲಕ್ಷ್ಮಿಪುರ ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ‘ಆನೆಗಳ ಆರೈಕೆ ಕೇಂದ್ರ’ ಸ್ಥಾಪಿಸಲಾಗಿದೆ. ಸದ್ಯ ಇಲ್ಲಿ ಆರು ಆನೆಗಳು ಇವೆ. ವಯಸ್ಸಾದ, ಗಾಯಗೊಂಡ ಹಾಗೂ ಅನಾರೋಗ್ಯಪೀಡಿತ ಆನೆಗಳನ್ನೂ ಇಲ್ಲಿ ಆರೈಕೆ ಮಾಡಲಾಗುತ್ತದೆ.</p>.<p>ಅರಣ್ಯ ಇಲಾಖೆಯು ಜಾಗ ಹಾಗೂ ಮೂಲ ಸೌಲಭ್ಯ ಕಲ್ಪಿಸಿದೆ. ಆಧುನಿಕ ಅಡುಗೆ ಕೋಣೆ ಸೇರಿದಂತೆ ಆನೆಗಳ ಸಾಕಣೆಗೆ ಬೇಕಾದ ಸುಸಜ್ಜಿತ ಸೌಲಭ್ಯ ಇಲ್ಲಿದೆ. ಮಾವುತರು, ಪಶು ವೈದ್ಯರು ಹಾಗೂ ಸಿಬ್ಬಂದಿ ಇಲ್ಲಿದ್ದಾರೆ. ಸುತ್ತಲೂ ವಿದ್ಯುತ್ ಬೇಲಿ ಹಾಕಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.</p>.<p>ಅರಣ್ಯ ಇಲಾಖೆಯ ಸಹಯೋಗದಲ್ಲಿ ವೈಲ್ಡ್ಲೈಫ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್ (ಡಬ್ಲ್ಯುಆರ್ಆರ್ಸಿ–ವನ್ಯಪ್ರಾಣಿಗಳ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ) ಎಂಬ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯು ಈ ಕೇಂದ್ರ ನಿರ್ವಹಿಸುತ್ತಿದೆ.</p>.<p>ಆನೆಗಳ ಆರೈಕೆ ಬಗ್ಗೆ ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯುಪಾ) ಹಲವು ವರ್ಷಗಳಿಂದ ಅಧ್ಯಯನ ಕೂಡ ನಡೆಸಿ ವರದಿ ನೀಡಿತ್ತು.</p>.<p>ರಾಜ್ಯದ ವಿವಿಧೆಡೆ ಆನೆ ಸಾಕಣೆ ಕೇಂದ್ರಗಳಿವೆ, ಮೈಸೂರಿನ ಕೂರ್ಗಳ್ಳಿಯಲ್ಲಿ ವಿವಿಧ ಪ್ರಾಣಿಗಳ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರವಿದೆ. ಆದರೆ, ಆನೆಗಳ ರಕ್ಷಣೆ, ಆರೈಕೆ ಹಾಗೂ ಪುನರ್ವಸತಿಗಾಗಿ ರಾಜ್ಯದಲ್ಲಿ ಇರುವುದು ಇದೊಂದೇ ಕೇಂದ್ರ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-25-108739122</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಅನಾರೋಗ್ಯದಿಂದ ಬಳಲುತ್ತಿರುವ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ‘ಲಕ್ಷ್ಮಿ’ ಜಿಲ್ಲೆಯ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಲಕ್ಷ್ಮಿಪುರ ಅರಣ್ಯ ವಲಯದಲ್ಲಿರುವ ‘ಆನೆಗಳ ಆರೈಕೆ ಕೇಂದ್ರ’ಕ್ಕೆ ಬುಧವಾರ ಬಂದಿಳಿಯಿತು.</p>.<p>ಆನೆಯ ಮಾವುತ ರಾಜಣ್ಣ, ಅವರ ಮೊಮ್ಮಗ ಭುವನ್, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಮಂಜುನಾಥ್ ಸಹಿತ ನಾಲ್ಕಾರು ಮಂದಿ ಆನೆ ಜೊತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿದರು. ಆನೆಯನ್ನು ಚಿಕಿತ್ಸೆಗಾಗಿ ಇಲ್ಲಿಗೆ ಕರೆತರಲಾಗಿದೆ. ಮೂರು ತಿಂಗಳು ಇಲ್ಲಿ ಇರಲಿದ್ದು, ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.</p>.<p>ಸುಮಾರು 12 ಗಂಟೆ ಪ್ರಯಾಣ ಮಾಡಿ ಬಸವಳಿದಿದ್ದ ಆನೆಗೆ ಸ್ನಾನ ಮಾಡಿಸಲಾಯಿತು. ಬಳಿಕ ದೇವರ ಪ್ರಸಾದ ಹಚ್ಚಿ, ಬಿಸಿಲಿನ ಝಳ ತಗ್ಗಿಸುವ ನಿಟ್ಟಿನಲ್ಲಿ ಕಲ್ಲಂಗಡಿ ಹಣ್ಣು ಸಹಿತ ಅದಕ್ಕೆ ಇಷ್ಟವಾದ ಆಹಾರ ನೀಡಲಾಯಿತು.</p>.<p>‘ಕೆಲವು ದಿನ ಆನೆಯ ಜತೆಗೆ ಇದ್ದು ಊರಿಗೆ ಹೋಗುತ್ತೇನೆ. ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ತನಕ ಆನೆಯ ಜತೆ ಇರಬೇಕಾಗುತ್ತದೆ’ ಎಂದು ಮಾವುತ ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>36 ವರ್ಷದ ಈ ಹೆಣ್ಣಾನೆಯನ್ನು ನಸುಕಿನಲ್ಲೇ ಲಾರಿಗೆ ಹತ್ತಿಸಲಾಗಿತ್ತು. ಆ ಭಾಗದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಇಲ್ಲದ ಕಾರಣ ಕೋಲಾರಕ್ಕೆ ಕರೆತರಲಾಗಿದೆ.</p>.<p>ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ವಸಂತ ವೈಭವ ಜಾನಪದ ಕಲಾಜಾಥಾದ ವೇಳೆ ಜಂಬೂಸವಾರಿ ನಡೆಯುತ್ತದೆ. ಲಕ್ಷ್ಮಿ ಆನೆಯು ಭುವನೇಶ್ವರಿಯನ್ನು ಒಳಗೊಂಡ ಅಂಬಾರಿ ಹೊತ್ತು ಸಾಗುತ್ತದೆ.</p>.<p>20 ಎಕರೆ ಪ್ರದೇಶ: ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಲಕ್ಷ್ಮಿಪುರ ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ‘ಆನೆಗಳ ಆರೈಕೆ ಕೇಂದ್ರ’ ಸ್ಥಾಪಿಸಲಾಗಿದೆ. ಸದ್ಯ ಇಲ್ಲಿ ಆರು ಆನೆಗಳು ಇವೆ. ವಯಸ್ಸಾದ, ಗಾಯಗೊಂಡ ಹಾಗೂ ಅನಾರೋಗ್ಯಪೀಡಿತ ಆನೆಗಳನ್ನೂ ಇಲ್ಲಿ ಆರೈಕೆ ಮಾಡಲಾಗುತ್ತದೆ.</p>.<p>ಅರಣ್ಯ ಇಲಾಖೆಯು ಜಾಗ ಹಾಗೂ ಮೂಲ ಸೌಲಭ್ಯ ಕಲ್ಪಿಸಿದೆ. ಆಧುನಿಕ ಅಡುಗೆ ಕೋಣೆ ಸೇರಿದಂತೆ ಆನೆಗಳ ಸಾಕಣೆಗೆ ಬೇಕಾದ ಸುಸಜ್ಜಿತ ಸೌಲಭ್ಯ ಇಲ್ಲಿದೆ. ಮಾವುತರು, ಪಶು ವೈದ್ಯರು ಹಾಗೂ ಸಿಬ್ಬಂದಿ ಇಲ್ಲಿದ್ದಾರೆ. ಸುತ್ತಲೂ ವಿದ್ಯುತ್ ಬೇಲಿ ಹಾಕಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.</p>.<p>ಅರಣ್ಯ ಇಲಾಖೆಯ ಸಹಯೋಗದಲ್ಲಿ ವೈಲ್ಡ್ಲೈಫ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್ (ಡಬ್ಲ್ಯುಆರ್ಆರ್ಸಿ–ವನ್ಯಪ್ರಾಣಿಗಳ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ) ಎಂಬ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯು ಈ ಕೇಂದ್ರ ನಿರ್ವಹಿಸುತ್ತಿದೆ.</p>.<p>ಆನೆಗಳ ಆರೈಕೆ ಬಗ್ಗೆ ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯುಪಾ) ಹಲವು ವರ್ಷಗಳಿಂದ ಅಧ್ಯಯನ ಕೂಡ ನಡೆಸಿ ವರದಿ ನೀಡಿತ್ತು.</p>.<p>ರಾಜ್ಯದ ವಿವಿಧೆಡೆ ಆನೆ ಸಾಕಣೆ ಕೇಂದ್ರಗಳಿವೆ, ಮೈಸೂರಿನ ಕೂರ್ಗಳ್ಳಿಯಲ್ಲಿ ವಿವಿಧ ಪ್ರಾಣಿಗಳ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರವಿದೆ. ಆದರೆ, ಆನೆಗಳ ರಕ್ಷಣೆ, ಆರೈಕೆ ಹಾಗೂ ಪುನರ್ವಸತಿಗಾಗಿ ರಾಜ್ಯದಲ್ಲಿ ಇರುವುದು ಇದೊಂದೇ ಕೇಂದ್ರ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-25-108739122</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>