<p>ಬೇತಮಂಗಲ: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಖಾಡಕ್ಕಿಳಿಯುವ ಮುನ್ನ ಅಭ್ಯರ್ಥಿಗಳು ಸಂಪ್ರದಾಯದಂತೆ ದೇವ ಮೂಲೆ ಎಂದೇ ಬಿಂಬಿತವಾಗಿರುವ ಕದರೀಗಾನಕುಪ್ಪ ಗ್ರಾಮದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸುವುದು ದಶಕಗಳ ಪದ್ಧತಿ. ಆದರೆ, ರಾಜಕೀಯವಾಗಿ ಇಷ್ಟೊಂದು ಮಹತ್ವ ಪಡೆದಿರುವ ಗ್ರಾಮದ ರಸ್ತೆಯೂ ಅಭಿವೃದ್ಧಿ ಕಾಣದಂತಾಗಿದೆ.</p>.<p>ವಿ.ಕೋಟ ಮುಖ್ಯರಸ್ತೆಯಿಂದ ಕದರೀಗಾನಕುಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಒಂದು ಕಿ.ಮೀ ಇದ್ದು, ಈ ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯು ಡಾಂಬರೀಕರಣ ಕಂಡು ವರ್ಷಗಳೇ ಕಳೆದಿದ್ದು, ರಸ್ತೆಯ ಡಾಂಬರು ಸಂಪೂರ್ಣ ಕಿತ್ತು ಹೋಗಿದೆ. ಹಾದಿಯುದ್ದಕ್ಕೂ ಚೂಪಾದ ಜೆಲ್ಲಿ ಕಲ್ಲುಗಳಿದ್ದು ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸವಾಲಿನ ವಿಷಯವಾಗಿದೆ.</p>.<p>ರಾಜಕೀಯ ನಾಯಕರಿಗೆ ಕದರೀಗಾನಕುಪ್ಪ ಗ್ರಾಮವು ಕೇವಲ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಾತ್ರ ನೆನಪಿಗೆ ಬರುತ್ತದೆ. ಗೆದ್ದ ಮೇಲೆ ಗ್ರಾಮದತ್ತ ಸುಳಿಯದ ನಾಯಕರು, ಪ್ರಚಾರದ ಆರಂಭಕ್ಕೆ ಮಾತ್ರ ಈ ದೇವಮೂಲೆಯನ್ನು ಬಳಸಿಕೊಳ್ಳುತ್ತಾರೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-18-1772366838</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇತಮಂಗಲ: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಖಾಡಕ್ಕಿಳಿಯುವ ಮುನ್ನ ಅಭ್ಯರ್ಥಿಗಳು ಸಂಪ್ರದಾಯದಂತೆ ದೇವ ಮೂಲೆ ಎಂದೇ ಬಿಂಬಿತವಾಗಿರುವ ಕದರೀಗಾನಕುಪ್ಪ ಗ್ರಾಮದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸುವುದು ದಶಕಗಳ ಪದ್ಧತಿ. ಆದರೆ, ರಾಜಕೀಯವಾಗಿ ಇಷ್ಟೊಂದು ಮಹತ್ವ ಪಡೆದಿರುವ ಗ್ರಾಮದ ರಸ್ತೆಯೂ ಅಭಿವೃದ್ಧಿ ಕಾಣದಂತಾಗಿದೆ.</p>.<p>ವಿ.ಕೋಟ ಮುಖ್ಯರಸ್ತೆಯಿಂದ ಕದರೀಗಾನಕುಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಒಂದು ಕಿ.ಮೀ ಇದ್ದು, ಈ ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯು ಡಾಂಬರೀಕರಣ ಕಂಡು ವರ್ಷಗಳೇ ಕಳೆದಿದ್ದು, ರಸ್ತೆಯ ಡಾಂಬರು ಸಂಪೂರ್ಣ ಕಿತ್ತು ಹೋಗಿದೆ. ಹಾದಿಯುದ್ದಕ್ಕೂ ಚೂಪಾದ ಜೆಲ್ಲಿ ಕಲ್ಲುಗಳಿದ್ದು ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸವಾಲಿನ ವಿಷಯವಾಗಿದೆ.</p>.<p>ರಾಜಕೀಯ ನಾಯಕರಿಗೆ ಕದರೀಗಾನಕುಪ್ಪ ಗ್ರಾಮವು ಕೇವಲ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಾತ್ರ ನೆನಪಿಗೆ ಬರುತ್ತದೆ. ಗೆದ್ದ ಮೇಲೆ ಗ್ರಾಮದತ್ತ ಸುಳಿಯದ ನಾಯಕರು, ಪ್ರಚಾರದ ಆರಂಭಕ್ಕೆ ಮಾತ್ರ ಈ ದೇವಮೂಲೆಯನ್ನು ಬಳಸಿಕೊಳ್ಳುತ್ತಾರೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-18-1772366838</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>