<p><strong>ಬೇತಮಂಗಲ:</strong> ಇಲ್ಲಿನ ಕಂಗಾಂಡ್ಲಹಳ್ಳಿ ಗ್ರಾಮದ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆಯಿಂದ ದೇವರಿಗೆ ಅಭಿಷೇಕ, ತಂಬಿಟ್ಟು ದೀಪಾರಾಧನೆ ಹಾಗೂ ವಿವಿಧ ಸೇವಾ ಪೂಜಾ ಕಾರ್ಯಗಳು ವೈಭವದಿಂದ ಜರುಗಿದವು.</p>.<p>ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರಲ್ಲದೆ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಶುಕ್ರವಾರದಿಂದ ಆರಂಭಗೊಂಡ ದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿತ್ತು.</p>.<p>ದೇವಾಲಯವನ್ನು ವಿವಿಧ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಕ್ಷೀರಾಭಿಷೇಕ, ಅನ್ನದಾನ, ದೀಪಾರಾಧನೆ, ತಂಬಿಟ್ಟು ದೀಪಗಳನ್ನು ಮಹಿಳೆಯರು ತಂದು ದೇವರಿಗೆ ಅರ್ಪಿಸಿದರು. ಶನಿವಾರ ರಾತ್ರಿ ವಿಜೃಂಭಣೆಯ ಕರಗ ಮಹೋತ್ಸವ ನಡೆಯಿತು.</p>.<p>ಈ ವೇಳೆ ಕೆಯುಡಿಎ ಮಾಜಿ ಅಧ್ಯಕ್ಷ ಮುನಿರತ್ನಂ ನಾಯ್ಡು, ನವೀನ್ ರಾಮ್ ನಾಯ್ಡು, ಪ್ರಕಾಶ್ ನಾಯ್ಡು, ಎಸ್. ಗಂಗಪ್ಪ, ಲೋಕನಾಥ್ ನಾಯ್ಡು, ಟಿ.ಪಿ ವೆಂಕಟರಾಮ್, ಕಣ್ಣಪ್ಪ, ವೆಂಕಟೇಶ್, ಶ್ರೀಧರ್, ರಮೇಶ್ ನಾಯ್ಡು , ಜಿ.ಭಾಸ್ಕರ್, ಶಂಕರ್, ಅಪ್ಪಿ ನಾಯ್ಡು, ದಾಮೋದರ್ ನಾಯ್ಡು, ತುಳುಸಿರಾಮ್, ಸುಬ್ರಮಣಿ , ಸುಮನ್ ಹಾಗೂ ಗ್ರಾಮಸ್ಥರು ಮಹಿಳೆಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇತಮಂಗಲ:</strong> ಇಲ್ಲಿನ ಕಂಗಾಂಡ್ಲಹಳ್ಳಿ ಗ್ರಾಮದ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆಯಿಂದ ದೇವರಿಗೆ ಅಭಿಷೇಕ, ತಂಬಿಟ್ಟು ದೀಪಾರಾಧನೆ ಹಾಗೂ ವಿವಿಧ ಸೇವಾ ಪೂಜಾ ಕಾರ್ಯಗಳು ವೈಭವದಿಂದ ಜರುಗಿದವು.</p>.<p>ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರಲ್ಲದೆ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಶುಕ್ರವಾರದಿಂದ ಆರಂಭಗೊಂಡ ದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿತ್ತು.</p>.<p>ದೇವಾಲಯವನ್ನು ವಿವಿಧ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಕ್ಷೀರಾಭಿಷೇಕ, ಅನ್ನದಾನ, ದೀಪಾರಾಧನೆ, ತಂಬಿಟ್ಟು ದೀಪಗಳನ್ನು ಮಹಿಳೆಯರು ತಂದು ದೇವರಿಗೆ ಅರ್ಪಿಸಿದರು. ಶನಿವಾರ ರಾತ್ರಿ ವಿಜೃಂಭಣೆಯ ಕರಗ ಮಹೋತ್ಸವ ನಡೆಯಿತು.</p>.<p>ಈ ವೇಳೆ ಕೆಯುಡಿಎ ಮಾಜಿ ಅಧ್ಯಕ್ಷ ಮುನಿರತ್ನಂ ನಾಯ್ಡು, ನವೀನ್ ರಾಮ್ ನಾಯ್ಡು, ಪ್ರಕಾಶ್ ನಾಯ್ಡು, ಎಸ್. ಗಂಗಪ್ಪ, ಲೋಕನಾಥ್ ನಾಯ್ಡು, ಟಿ.ಪಿ ವೆಂಕಟರಾಮ್, ಕಣ್ಣಪ್ಪ, ವೆಂಕಟೇಶ್, ಶ್ರೀಧರ್, ರಮೇಶ್ ನಾಯ್ಡು , ಜಿ.ಭಾಸ್ಕರ್, ಶಂಕರ್, ಅಪ್ಪಿ ನಾಯ್ಡು, ದಾಮೋದರ್ ನಾಯ್ಡು, ತುಳುಸಿರಾಮ್, ಸುಬ್ರಮಣಿ , ಸುಮನ್ ಹಾಗೂ ಗ್ರಾಮಸ್ಥರು ಮಹಿಳೆಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>