<p><strong>ಮುಳಬಾಗಿಲು:</strong> ಕೋಲಾರ ಹಾಲು ಒಕ್ಕೂಟದಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ಪೂರ್ವ ವಿಭಾಗದ ಕೋಮುಲ್ ನಿರ್ದೇಶಕ ಕೆ.ಎನ್. ನಾಗರಾಜ್ ಶುಕ್ರವಾರ ತಿಳಿಸಿದರು.</p>.<p>ನಗರದ ಎಪಿಎಂಸಿ ಕಚೇರಿ ಬಳಿಯ ಕೋಮುಲ್ ಶಿಬಿರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.</p>.<p>‘ಕೋಮುಲ್ ಹಾಲು ಒಕ್ಕೂಟದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಮಂಜುನಾಥ ಗೌಡ ಸೇರಿದಂತೆ ಇತರರು ಆರೋಪಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಆರೋಪ. ಒಂದು ವೇಳೆ ಈ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ಅವರ ಬಳಿ ಇದ್ದಲ್ಲಿ, ಅವುಗಳನ್ನು ಸಾರ್ವಜನಿಕಗೊಳಿಸಬೇಕು. ನಾವು ತಪ್ಪು ಮಾಡಿದ್ದಲ್ಲಿ, ನಮ್ಮನ್ನು ಗಲ್ಲಿಗೇರಿಸಲಿ’ ಎಂದು ಸವಾಲು ಹಾಕಿದರು.</p>.<p>ಒಕ್ಕೂಟದಲ್ಲಿ ಯಾವುದೇ ಟೆಂಡರ್ ಅಥವಾ ವ್ಯವಹಾರ ನಡೆಯಲು 20 ನಿರ್ದೇಶಕರು, ಸರ್ಕಾರದಿಂದ ನೇಮಕವಾದ ನಾಮನಿರ್ದೇಶಿತ ಸದಸ್ಯರು, ಒಬ್ಬ ಜೆ.ಆರ್, ಒಬ್ಬ ಎ.ಎಚ್, ಕೋಮುಲ್ ಒಕ್ಕೂಟದ ಒಬ್ಬ ವಿಶೇಷ ನಿರ್ದೇಶಕರ ಅನುಮತಿ ಪಡೆಯಬೇಕು. ಅದು ಹೇಗೆ ಭ್ರಷ್ಟಾಚಾರ ನಡೆಯಲು ಸಾಧ್ಯ ಎಂದರು.</p>.<p>ಈಗಾಗಲೇ ಇ.ಡಿ ಹಾಗೂ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದು, ವಿಚಾರಣೆಯು ನ್ಯಾಯಾಲಯದ ಹಂತದಲ್ಲಿದೆ. ಹೀಗಿದ್ದರೂ ಆರೋಪ ಮಾಡುತ್ತಾ ಒಕ್ಕೂಟದ ನಾಶಕ್ಕೆ ಮುಂದಾಗಿದ್ದಾರೆ ಎಂದರು.</p>.<p>ಪಶ್ಚಿಮ ಭಾಗದ ನಿರ್ದೇಶಕ ಬಿ.ವಿ.ಸಾಮೇಗೌಡ ಮಾತನಾಡಿ, 38 ವರ್ಷಗಳ ಹಿಂದೆ ಪ್ರಾರಂಭವಾದ ಒಕ್ಕೂಟದಲ್ಲಿ ₹500 ಕೋಟಿಗಳಲ್ಲಿ ಚಿಕ್ಕಬಳ್ಳಾಪುರದ ಮೆಗಾ ಡೇರಿ ಹಾಗೂ ಐಸ್ ಕ್ರೀಂ ಕಾರ್ಖಾನೆ ಹಾಗೂ ಕೋಲಾರದ ಸೋಲಾರ್ ಘಟಕ ಹಾಗೂ ನೂತನ ಕಾಮಗಾರಿ ಕಟ್ಟಡಗಳಿಗೆ ಅನುದಾನ ಹಂಚಿಕೆಯಾಗಿದೆ. ಆದರೆ, ಕೋಲಾರ ಒಕ್ಕೂಟದಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆಸಲು ಹೇಗೆ ಸಾಧ್ಯ ಎಂದು ಹೇಳಿದರು.</p>.<p>ಡೇರಿ ಅಧ್ಯಕ್ಷ ನಾಗಮಂಗಲ ಶಂಕರಪ್ಪ, ರಾಮಚಂದ್ರಪ್ಪ, ಪ್ರತಾಪ್, ವೆಂಕಟರಾಮಪ್ಪ, ಶ್ರೀನಿವಾಸ್, ಕೃಷ್ಣಪ್ಪ, ಮಂಜುನಾಥ, ಮುರಳಿ, ಜನಾರ್ಧಾನ್, ರವಿ, ಹರೀಶ್, ಅಮರ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-18-1742182608</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ಕೋಲಾರ ಹಾಲು ಒಕ್ಕೂಟದಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ಪೂರ್ವ ವಿಭಾಗದ ಕೋಮುಲ್ ನಿರ್ದೇಶಕ ಕೆ.ಎನ್. ನಾಗರಾಜ್ ಶುಕ್ರವಾರ ತಿಳಿಸಿದರು.</p>.<p>ನಗರದ ಎಪಿಎಂಸಿ ಕಚೇರಿ ಬಳಿಯ ಕೋಮುಲ್ ಶಿಬಿರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.</p>.<p>‘ಕೋಮುಲ್ ಹಾಲು ಒಕ್ಕೂಟದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಮಂಜುನಾಥ ಗೌಡ ಸೇರಿದಂತೆ ಇತರರು ಆರೋಪಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಆರೋಪ. ಒಂದು ವೇಳೆ ಈ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ಅವರ ಬಳಿ ಇದ್ದಲ್ಲಿ, ಅವುಗಳನ್ನು ಸಾರ್ವಜನಿಕಗೊಳಿಸಬೇಕು. ನಾವು ತಪ್ಪು ಮಾಡಿದ್ದಲ್ಲಿ, ನಮ್ಮನ್ನು ಗಲ್ಲಿಗೇರಿಸಲಿ’ ಎಂದು ಸವಾಲು ಹಾಕಿದರು.</p>.<p>ಒಕ್ಕೂಟದಲ್ಲಿ ಯಾವುದೇ ಟೆಂಡರ್ ಅಥವಾ ವ್ಯವಹಾರ ನಡೆಯಲು 20 ನಿರ್ದೇಶಕರು, ಸರ್ಕಾರದಿಂದ ನೇಮಕವಾದ ನಾಮನಿರ್ದೇಶಿತ ಸದಸ್ಯರು, ಒಬ್ಬ ಜೆ.ಆರ್, ಒಬ್ಬ ಎ.ಎಚ್, ಕೋಮುಲ್ ಒಕ್ಕೂಟದ ಒಬ್ಬ ವಿಶೇಷ ನಿರ್ದೇಶಕರ ಅನುಮತಿ ಪಡೆಯಬೇಕು. ಅದು ಹೇಗೆ ಭ್ರಷ್ಟಾಚಾರ ನಡೆಯಲು ಸಾಧ್ಯ ಎಂದರು.</p>.<p>ಈಗಾಗಲೇ ಇ.ಡಿ ಹಾಗೂ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದು, ವಿಚಾರಣೆಯು ನ್ಯಾಯಾಲಯದ ಹಂತದಲ್ಲಿದೆ. ಹೀಗಿದ್ದರೂ ಆರೋಪ ಮಾಡುತ್ತಾ ಒಕ್ಕೂಟದ ನಾಶಕ್ಕೆ ಮುಂದಾಗಿದ್ದಾರೆ ಎಂದರು.</p>.<p>ಪಶ್ಚಿಮ ಭಾಗದ ನಿರ್ದೇಶಕ ಬಿ.ವಿ.ಸಾಮೇಗೌಡ ಮಾತನಾಡಿ, 38 ವರ್ಷಗಳ ಹಿಂದೆ ಪ್ರಾರಂಭವಾದ ಒಕ್ಕೂಟದಲ್ಲಿ ₹500 ಕೋಟಿಗಳಲ್ಲಿ ಚಿಕ್ಕಬಳ್ಳಾಪುರದ ಮೆಗಾ ಡೇರಿ ಹಾಗೂ ಐಸ್ ಕ್ರೀಂ ಕಾರ್ಖಾನೆ ಹಾಗೂ ಕೋಲಾರದ ಸೋಲಾರ್ ಘಟಕ ಹಾಗೂ ನೂತನ ಕಾಮಗಾರಿ ಕಟ್ಟಡಗಳಿಗೆ ಅನುದಾನ ಹಂಚಿಕೆಯಾಗಿದೆ. ಆದರೆ, ಕೋಲಾರ ಒಕ್ಕೂಟದಲ್ಲಿ ₹500 ಕೋಟಿ ಭ್ರಷ್ಟಾಚಾರ ನಡೆಸಲು ಹೇಗೆ ಸಾಧ್ಯ ಎಂದು ಹೇಳಿದರು.</p>.<p>ಡೇರಿ ಅಧ್ಯಕ್ಷ ನಾಗಮಂಗಲ ಶಂಕರಪ್ಪ, ರಾಮಚಂದ್ರಪ್ಪ, ಪ್ರತಾಪ್, ವೆಂಕಟರಾಮಪ್ಪ, ಶ್ರೀನಿವಾಸ್, ಕೃಷ್ಣಪ್ಪ, ಮಂಜುನಾಥ, ಮುರಳಿ, ಜನಾರ್ಧಾನ್, ರವಿ, ಹರೀಶ್, ಅಮರ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-18-1742182608</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>