<p>ಮಾಲೂರು: ನಗರದ ಹನಮಂತ ನಗರದ ಮಾಲೂರು-ಕೋಲಾರ ರಸ್ತೆಯ ಸುದ್ಧಗುಂಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಹಸಿ ಕರಗ ಮಹೋತ್ಸವ ಅಪಾರ ಜನಸ್ತೋಮದೊಂದಿಗೆ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.</p>.<p>ಪ್ರತಿ ವರ್ಷದಂತೆ ಈ ವರ್ಷವೂ ಧರ್ಮರಾಯಸ್ವಾಮಿ ದ್ರೌಪದಂಭಾ ಮಹೋತ್ಸವ ಹಾಗೂ ಪಟಾಲಮ್ಮ, ಮುತ್ಯಾಲಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿತು.</p>.<p>ಗುರುವಾರ ರಾತ್ರಿ ಅಪಾರ ಜನಸ್ತೋಮದೊಂದಿಗೆ ಕರಗ ಪೂಜಾರಿ ವೆಂಕಟರೋಣ, ಅಭಿಲಾಷ್, ಮಂಜುನಾಥ್ ಅವರು ಕರಗ ಹೊತ್ತು ತಮಟೆ ಸದ್ದಿಗೆ ತಕ್ಕಂತೆ ಕುಣಿಯುತ್ತಾ ಹೊರ ಬಂದರು.</p>.<p>ವೀರ ಕುಮಾರರು ಕರಗದಮ್ಮನಿಗೆ ಅಲಗು ಸೇವೆ ಅರ್ಪಿಸಿದರು. ಕರಗ ಹೊತ್ತ ಪೂಜಾರಿಗಳು ಸುದ್ದಗುಂಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ನಗರದಲ್ಲಿ ಸಂಚರಿಸಿತು. ಭಕ್ತರು ಕರಗದಮ್ಮನಿಗೆ ಮಲ್ಲಿಗೆ ಹೂವು ಅರ್ಪಿಸಿದರು. ಹಸಿ ಕರಗ ವೀಕ್ಷಣೆಗೆ ಸಾವಿರಾರು ಸಂಖ್ಯೆಯ ಭಕ್ತರು ನೆರೆದಿದ್ದರು.</p>.<p>ಏ.10 ಶುಕ್ರವಾರ ಮಹಿಳೆಯರು ತಂಬಿಟ್ಟಿನ ಆರತಿಯನ್ನು ತಾಯಿಗೆ ಅರ್ಪಿಸಿದರು. ಪಟಾಲಮ್ಮ ದೇವಾಲಯ ಮುಂಭಾಗದಲ್ಲಿ ರಾತ್ರಿ 3ಗಂಟೆಗೆ ಅಗ್ನಿಕೊಂಡ ನೆರವೇರಿತು.</p>.<p>ಏ.11ರಂದು ಪಟಾಲಮ್ಮ ದೇವಾಲಯದಲ್ಲಿ ಸಿಡಿ ಉತ್ಸವ ನಡೆಯಲಿದೆ. ಸಿಡೀರಣ್ಣ ದೇವರನ್ನು ಭುಜಗಳ ಮೇಲೆ ಹೊತ್ತ ಪೂಜಾರಿ ಹಲಗೆ ತಾಳಕ್ಕೆ ನರ್ತಿಸುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಸಂಜೆ ಸಿಡೀರಣ್ಣ ಮೂರ್ತಿಯನ್ನು ಸಿದ್ಧಪಡಿಸಿ ಸಿಡಿ ಕಂಭಕ್ಕೆ ಕಟ್ಟಿ ಪೂಜೆ ಸಲ್ಲಿಸಲಾಗುತ್ತಿದೆ.</p>.<p>ಏ.12ರಂದು ಧರ್ಮರಾಯಸ್ವಾಮಿ ದ್ರೌಪದಾಂಭ ಹೂವಿನ ಕರಗ ರಾತ್ರಿ11ಕ್ಕೆ ನಡೆಯಲಿದೆ. ಪಟ್ಟಣದ ಎಲ್ಲಾ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ.</p>.<p>ಶಾಸಕ ಕೆ.ವೈ.ನಂಜೇಗೌಡ, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್, ತಹಶೀಲ್ದಾರ್ ಎಂ.ವಿ.ರೂಪ, ಸುನೀಲ್ ನಂಜೇಗೌಡ, ಹನುಮಂತಪ್ಪ, ಎಚ್,ಎಂ.ವಿಜಯನರಸಿಂಹ, ಶ್ರೀನಿವಾಸ್, ಎಂ.ಪಿ.ವಿಜಯ್ ಕುಮಾರ್, ಪಿ.ವೆಂಕಟೇಶ್. ಸಿ.ಲಕ್ಷ್ಮಿನಾರಾಯಣ್, ಸಿ.ಪಿ.ನಾಗರಾಜ್, ಮಾಜಿ ಸದಸ್ಯ ಎ.ರಾಜಪ್ಪ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260411-18-2043421600</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಲೂರು: ನಗರದ ಹನಮಂತ ನಗರದ ಮಾಲೂರು-ಕೋಲಾರ ರಸ್ತೆಯ ಸುದ್ಧಗುಂಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಹಸಿ ಕರಗ ಮಹೋತ್ಸವ ಅಪಾರ ಜನಸ್ತೋಮದೊಂದಿಗೆ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.</p>.<p>ಪ್ರತಿ ವರ್ಷದಂತೆ ಈ ವರ್ಷವೂ ಧರ್ಮರಾಯಸ್ವಾಮಿ ದ್ರೌಪದಂಭಾ ಮಹೋತ್ಸವ ಹಾಗೂ ಪಟಾಲಮ್ಮ, ಮುತ್ಯಾಲಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿತು.</p>.<p>ಗುರುವಾರ ರಾತ್ರಿ ಅಪಾರ ಜನಸ್ತೋಮದೊಂದಿಗೆ ಕರಗ ಪೂಜಾರಿ ವೆಂಕಟರೋಣ, ಅಭಿಲಾಷ್, ಮಂಜುನಾಥ್ ಅವರು ಕರಗ ಹೊತ್ತು ತಮಟೆ ಸದ್ದಿಗೆ ತಕ್ಕಂತೆ ಕುಣಿಯುತ್ತಾ ಹೊರ ಬಂದರು.</p>.<p>ವೀರ ಕುಮಾರರು ಕರಗದಮ್ಮನಿಗೆ ಅಲಗು ಸೇವೆ ಅರ್ಪಿಸಿದರು. ಕರಗ ಹೊತ್ತ ಪೂಜಾರಿಗಳು ಸುದ್ದಗುಂಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ನಗರದಲ್ಲಿ ಸಂಚರಿಸಿತು. ಭಕ್ತರು ಕರಗದಮ್ಮನಿಗೆ ಮಲ್ಲಿಗೆ ಹೂವು ಅರ್ಪಿಸಿದರು. ಹಸಿ ಕರಗ ವೀಕ್ಷಣೆಗೆ ಸಾವಿರಾರು ಸಂಖ್ಯೆಯ ಭಕ್ತರು ನೆರೆದಿದ್ದರು.</p>.<p>ಏ.10 ಶುಕ್ರವಾರ ಮಹಿಳೆಯರು ತಂಬಿಟ್ಟಿನ ಆರತಿಯನ್ನು ತಾಯಿಗೆ ಅರ್ಪಿಸಿದರು. ಪಟಾಲಮ್ಮ ದೇವಾಲಯ ಮುಂಭಾಗದಲ್ಲಿ ರಾತ್ರಿ 3ಗಂಟೆಗೆ ಅಗ್ನಿಕೊಂಡ ನೆರವೇರಿತು.</p>.<p>ಏ.11ರಂದು ಪಟಾಲಮ್ಮ ದೇವಾಲಯದಲ್ಲಿ ಸಿಡಿ ಉತ್ಸವ ನಡೆಯಲಿದೆ. ಸಿಡೀರಣ್ಣ ದೇವರನ್ನು ಭುಜಗಳ ಮೇಲೆ ಹೊತ್ತ ಪೂಜಾರಿ ಹಲಗೆ ತಾಳಕ್ಕೆ ನರ್ತಿಸುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಸಂಜೆ ಸಿಡೀರಣ್ಣ ಮೂರ್ತಿಯನ್ನು ಸಿದ್ಧಪಡಿಸಿ ಸಿಡಿ ಕಂಭಕ್ಕೆ ಕಟ್ಟಿ ಪೂಜೆ ಸಲ್ಲಿಸಲಾಗುತ್ತಿದೆ.</p>.<p>ಏ.12ರಂದು ಧರ್ಮರಾಯಸ್ವಾಮಿ ದ್ರೌಪದಾಂಭ ಹೂವಿನ ಕರಗ ರಾತ್ರಿ11ಕ್ಕೆ ನಡೆಯಲಿದೆ. ಪಟ್ಟಣದ ಎಲ್ಲಾ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ.</p>.<p>ಶಾಸಕ ಕೆ.ವೈ.ನಂಜೇಗೌಡ, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್, ತಹಶೀಲ್ದಾರ್ ಎಂ.ವಿ.ರೂಪ, ಸುನೀಲ್ ನಂಜೇಗೌಡ, ಹನುಮಂತಪ್ಪ, ಎಚ್,ಎಂ.ವಿಜಯನರಸಿಂಹ, ಶ್ರೀನಿವಾಸ್, ಎಂ.ಪಿ.ವಿಜಯ್ ಕುಮಾರ್, ಪಿ.ವೆಂಕಟೇಶ್. ಸಿ.ಲಕ್ಷ್ಮಿನಾರಾಯಣ್, ಸಿ.ಪಿ.ನಾಗರಾಜ್, ಮಾಜಿ ಸದಸ್ಯ ಎ.ರಾಜಪ್ಪ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260411-18-2043421600</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>