ನಗರದ ಸಾರಿಗೆ ನಗರ ನಿವಾಸಿಯಾಗಿರುವ ಯುವಕರಾತ್ರಿ 10 ಗಂಟೆ ಸುಮಾರಿಗೆ ಬೈಕ್ನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಂದು ಏಕಾಏಕಿ ಗರ್ಭಗುಡಿಗೆ ನುಗ್ಗಿದ್ದಾನೆ. ಈ ವೇಳೆ ಅರ್ಚಕರು ಹಾಗೂ ಭಕ್ತರು ಆತನನ್ನು ದೇವಸ್ಥಾನದಿಂದ ಹೊರ ಕಳುಹಿಸಲು ಯತ್ನಿಸಿದ್ದಾರೆ. ಆದರೆ, ಭಕ್ತರು ಹಾಗೂ ಅರ್ಚಕರೊಂದಿಗೆ ವಾಗ್ವಾದ ನಡೆಸಿ, ದೇವರ ಎದುರು ಅಂಗಾತಮಲಗಿ ಬಟ್ಟೆ ಹರಿದುಕೊಂಡು, ‘ನನ್ನನ್ನು ಬಲಿ ತೆಗೆದುಕೋ ದೇವರೇ’ ಎಂದು ಚೀರಾಡಿದ್ದಾನೆ.