<p><strong>ಕೋಲಾರ:</strong> ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಆದರೆ, ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಗೂಳಿಗಾನಹಳ್ಳಿ ನಾಗರಾಜ್ ಹಾಗೂ ವಕೀಲ ಕೆ.ಪಿ.ವೆಂಕಟಾಚಲಪತಿ ಆರೋಪಿಸಿದರು.</p>.<p>ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕರಣದಲ್ಲಿ ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳು ಹಾಗೂ 75 ಅಭ್ಯರ್ಥಿಗಳ ವಿರುದ್ಧ ತನಿಖೆ ಆಗಬೇಕು. ಈ ಸಂಬಂಧವಾಗಿ 30 ದಿನಗಳ ಕಾಲಾವಕಾಶ ನೀಡುತ್ತೇವೆ. ಒಂದು ವೇಳೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸದಿದ್ದಲ್ಲಿ ನ್ಯಾಯಾಲಯ ಮೊರೆ ಹೋಗಿ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ಅಲ್ಲದೇ; ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಆಗ್ರಹಿಸುತ್ತೇವೆ. ಅವರು ಕ್ರಮ ವಹಿಸದಿದ್ದರೆ ಹೈಕೋರ್ಟ್ ಕದ ತಟ್ಟುತ್ತೇವೆ’ ಎಂದರು.</p>.<p>ವೆಂಕಟಚಲಾಪತಿ ಮಾತನಾಡಿ, ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆಯಂತೆ ನಗರ ಠಾಣೆಗೆ ದೂರಿನೊಂದಿಗೆ ಸಾಕ್ಷ್ಯಗಳು, ದಾಖಲೆಗಳನ್ನು ನೀಡಿದ್ದೇವೆ. ಇನ್ನಷ್ಟು ದಾಖಲೆ ನೀಡಲೂ ಸಿದ್ಧ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ. ಎಫ್ಐಆರ್ ದಾಖಲಿಸಲು ಏಕೆ ಎಸ್ಪಿ ತಡ ಮಾಡುತ್ತಿದ್ದಾರೆ? ಶಾಸಕ ಮತ್ತು ಕೋಮುಲ್ ಅಧ್ಯಕ್ಷ ನಂಜೇಗೌಡರು ತಾವು ಶುದ್ಧ ಹಸ್ತರು, ಯಾವುದೇ ಅಕ್ರಮ ಮಾಡಿಲ್ಲ ಎನ್ನುತ್ತಾರೆ. ದೂರು ಕೊಟ್ಟ ಕೆಲವೇ ನಿಮಿಷಗಳಲ್ಲಿ ಅವರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಎಸ್ಪಿಯನ್ನು ಭೇಟಿ ಮಾಡಿರುವ ಬಗ್ಗೆ ನಮಗೆ ಮಾಹಿತಿ ಇದೆ. ಏಕೆ ಭೇಟಿಯಾಗಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.</p>.<p>ಎಸ್ಪಿ ಯಾರ ಪರ ಕೆಲಸ ಮಾಡಲು ಇದ್ದಾರೆ. ಇಂಥ ದೂರು ಕೊಟ್ಟ ತಕ್ಷಣ ಕಾರ್ಯ ಪ್ರವೃತ್ತರಾಗಬೇಕಲ್ಲವೇ? ಇಲ್ಲಿ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ನಿರೀಕ್ಷೆಗೆ ಸ್ಪಂದಿಸಿಲ್ಲ ಎಂದು ದೂರಿದರು.</p>.<p>ನೇಮಕಾತಿ ಸಂಬಂಧ ಓಎಂಆರ್ ಶೀಟು ನಕಲು ಮಾಡಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ನೇಮಕಾತಿ ಪಟ್ಟಿಯನ್ನು ಪರೀಕ್ಷೆಯ ಮುನ್ನವೇ ಸಿದ್ಧಪಡಿಸಿಕೊಂಡಿದ್ದಾರೆ. ಪ್ರತಿ ಹುದ್ದೆಗೆ ಲಕ್ಷಗಟ್ಟಲೇ ವಸೂಲಿ ಮಾಡಿದ್ದಾರೆ. ಪರೀಕ್ಷೆಯನ್ನು ನಡೆಸಿದ ಮಂಗಳೂರು ವಿಶ್ವವಿದ್ಯಾಲಯದವರು ಉತ್ತರ ಪತ್ರಿಕೆಗಳನ್ನು ಹೆಚ್ಚುವರಿಯಾಗಿ ಮುದ್ರಿಸಿ ಅಭ್ಯರ್ಥಿಗಳಿಂದ ಉತ್ತರ ಬರೆಸಿಕೊಂಡು ಅದಲು ಬದಲು ಮಾಡಿದ್ದಾರೆ. 375 ಜನರನ್ನು ಮೌಖಿಕ ಸಂದರ್ಶನಕ್ಕೆ ಕರೆಯಬೇಕಿತ್ತು. 320ಕ್ಕೆ ಏಕೆ ನಿಂತಿತು? ಎರಡು ಓಎಂಆರ್ ಶೀಟು ಏಕೆ ಸೃಷ್ಟಿ ಮಾಡಲಾಯಿತು ಎಂದು ಪ್ರಶ್ನಿಸಿದರು.</p>.<p>ಈಚೆಗೆ ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಪತ್ರಿಕಾಗೋಷ್ಠಿ ನಡೆಸಿ ಕೆಲ ವಿಚಾರ ಒಪ್ಪಿಕೊಂಡಿದ್ದಾರೆ. ಒಂದೆರಡು ಅಭ್ಯರ್ಥಿಗಳಿಗೆ ನಿರ್ದೇಶಕರ ವಿವೇಚನೆಯಂತೆ ಅಂಕ ಕೊಡಬಹುದು ಎಂದಿದ್ದಾರೆ. ಅದು ಬಿಟ್ಟು ಬೇರೇನೂ ನಡೆದಿಲ್ಲವೆಂದು ಹೇಳಿರುವ ಅವರು ತನಿಖೆ ಆಗಲಿ, ತಪ್ಪು ಸಂಭವಿಸಿದ್ದರೆ ಶಿಕ್ಷೆ ಆಗಲಿ ಎಂದಿದ್ದಾರೆ. ಈ ಮೂಲಕ ನೇಮಕಾತಿ ಪ್ರಕರಣದಲ್ಲಿ ಅವರು ಮಾಫಿ ಸಾಕ್ಷಿ ಆಗಿದ್ದಾರೆ ಎಂದರು.</p>.<p>ಪರೀಕ್ಷೆಯಲ್ಲಿ ಒಳಸಂಚು ನಡೆದಿದೆ. ಸಂದರ್ಶನ ರದ್ದು ಮಾಡಿ ಹೊಸದಾಗಿ ನಡೆಸಿ. ಪ್ರಾಮಾಣಿಕರಾಗಿದ್ದರೆ ಅವರಿಗೇ ಕೆಲಸ ಕೊಡಲಿ. ಓಎಂಆರ್ ಶೀಟ್ ನಮಗೆ ತಡವಾಗಿ ಸಿಕ್ಕಿದೆ. ಅದಕ್ಕೆ ಒಂದು ವರ್ಷ ಹಿಡಿಯಿತು. ದಾಖಲೆ ಇಟ್ಟುಕೊಂಡು ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು.</p>.<p>ಗೂಳಿಗಾನಹಳ್ಳಿ ನಾಗರಾಜ್ ಮಾತನಾಡಿ, ‘ಪ್ರಕರಣಕ್ಕೆ ಸಂಬಂಧಿಸಿದ ಕೋಮುಲ್ ಸಿಬ್ಬಂದಿಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಅನುಮತಿ ನೀಡುತ್ತಿಲ್ಲ’ ಎಂದು ದೂರಿದರು.</p>.<p>ಹೋರಾಟಗಾರ ರಮೇಶ್ ಬಾಬು ಮಾತನಾಡಿ, ಸಿಬ್ಬಂದಿಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲು ಕೋಮುಲ್ ಮೇಲಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಈ ಕೂಡಲೇ ಅದಕ್ಕೆ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-18-2009533376</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಆದರೆ, ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಗೂಳಿಗಾನಹಳ್ಳಿ ನಾಗರಾಜ್ ಹಾಗೂ ವಕೀಲ ಕೆ.ಪಿ.ವೆಂಕಟಾಚಲಪತಿ ಆರೋಪಿಸಿದರು.</p>.<p>ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕರಣದಲ್ಲಿ ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳು ಹಾಗೂ 75 ಅಭ್ಯರ್ಥಿಗಳ ವಿರುದ್ಧ ತನಿಖೆ ಆಗಬೇಕು. ಈ ಸಂಬಂಧವಾಗಿ 30 ದಿನಗಳ ಕಾಲಾವಕಾಶ ನೀಡುತ್ತೇವೆ. ಒಂದು ವೇಳೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸದಿದ್ದಲ್ಲಿ ನ್ಯಾಯಾಲಯ ಮೊರೆ ಹೋಗಿ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ಅಲ್ಲದೇ; ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಆಗ್ರಹಿಸುತ್ತೇವೆ. ಅವರು ಕ್ರಮ ವಹಿಸದಿದ್ದರೆ ಹೈಕೋರ್ಟ್ ಕದ ತಟ್ಟುತ್ತೇವೆ’ ಎಂದರು.</p>.<p>ವೆಂಕಟಚಲಾಪತಿ ಮಾತನಾಡಿ, ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆಯಂತೆ ನಗರ ಠಾಣೆಗೆ ದೂರಿನೊಂದಿಗೆ ಸಾಕ್ಷ್ಯಗಳು, ದಾಖಲೆಗಳನ್ನು ನೀಡಿದ್ದೇವೆ. ಇನ್ನಷ್ಟು ದಾಖಲೆ ನೀಡಲೂ ಸಿದ್ಧ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ. ಎಫ್ಐಆರ್ ದಾಖಲಿಸಲು ಏಕೆ ಎಸ್ಪಿ ತಡ ಮಾಡುತ್ತಿದ್ದಾರೆ? ಶಾಸಕ ಮತ್ತು ಕೋಮುಲ್ ಅಧ್ಯಕ್ಷ ನಂಜೇಗೌಡರು ತಾವು ಶುದ್ಧ ಹಸ್ತರು, ಯಾವುದೇ ಅಕ್ರಮ ಮಾಡಿಲ್ಲ ಎನ್ನುತ್ತಾರೆ. ದೂರು ಕೊಟ್ಟ ಕೆಲವೇ ನಿಮಿಷಗಳಲ್ಲಿ ಅವರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಎಸ್ಪಿಯನ್ನು ಭೇಟಿ ಮಾಡಿರುವ ಬಗ್ಗೆ ನಮಗೆ ಮಾಹಿತಿ ಇದೆ. ಏಕೆ ಭೇಟಿಯಾಗಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.</p>.<p>ಎಸ್ಪಿ ಯಾರ ಪರ ಕೆಲಸ ಮಾಡಲು ಇದ್ದಾರೆ. ಇಂಥ ದೂರು ಕೊಟ್ಟ ತಕ್ಷಣ ಕಾರ್ಯ ಪ್ರವೃತ್ತರಾಗಬೇಕಲ್ಲವೇ? ಇಲ್ಲಿ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ನಿರೀಕ್ಷೆಗೆ ಸ್ಪಂದಿಸಿಲ್ಲ ಎಂದು ದೂರಿದರು.</p>.<p>ನೇಮಕಾತಿ ಸಂಬಂಧ ಓಎಂಆರ್ ಶೀಟು ನಕಲು ಮಾಡಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ನೇಮಕಾತಿ ಪಟ್ಟಿಯನ್ನು ಪರೀಕ್ಷೆಯ ಮುನ್ನವೇ ಸಿದ್ಧಪಡಿಸಿಕೊಂಡಿದ್ದಾರೆ. ಪ್ರತಿ ಹುದ್ದೆಗೆ ಲಕ್ಷಗಟ್ಟಲೇ ವಸೂಲಿ ಮಾಡಿದ್ದಾರೆ. ಪರೀಕ್ಷೆಯನ್ನು ನಡೆಸಿದ ಮಂಗಳೂರು ವಿಶ್ವವಿದ್ಯಾಲಯದವರು ಉತ್ತರ ಪತ್ರಿಕೆಗಳನ್ನು ಹೆಚ್ಚುವರಿಯಾಗಿ ಮುದ್ರಿಸಿ ಅಭ್ಯರ್ಥಿಗಳಿಂದ ಉತ್ತರ ಬರೆಸಿಕೊಂಡು ಅದಲು ಬದಲು ಮಾಡಿದ್ದಾರೆ. 375 ಜನರನ್ನು ಮೌಖಿಕ ಸಂದರ್ಶನಕ್ಕೆ ಕರೆಯಬೇಕಿತ್ತು. 320ಕ್ಕೆ ಏಕೆ ನಿಂತಿತು? ಎರಡು ಓಎಂಆರ್ ಶೀಟು ಏಕೆ ಸೃಷ್ಟಿ ಮಾಡಲಾಯಿತು ಎಂದು ಪ್ರಶ್ನಿಸಿದರು.</p>.<p>ಈಚೆಗೆ ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಪತ್ರಿಕಾಗೋಷ್ಠಿ ನಡೆಸಿ ಕೆಲ ವಿಚಾರ ಒಪ್ಪಿಕೊಂಡಿದ್ದಾರೆ. ಒಂದೆರಡು ಅಭ್ಯರ್ಥಿಗಳಿಗೆ ನಿರ್ದೇಶಕರ ವಿವೇಚನೆಯಂತೆ ಅಂಕ ಕೊಡಬಹುದು ಎಂದಿದ್ದಾರೆ. ಅದು ಬಿಟ್ಟು ಬೇರೇನೂ ನಡೆದಿಲ್ಲವೆಂದು ಹೇಳಿರುವ ಅವರು ತನಿಖೆ ಆಗಲಿ, ತಪ್ಪು ಸಂಭವಿಸಿದ್ದರೆ ಶಿಕ್ಷೆ ಆಗಲಿ ಎಂದಿದ್ದಾರೆ. ಈ ಮೂಲಕ ನೇಮಕಾತಿ ಪ್ರಕರಣದಲ್ಲಿ ಅವರು ಮಾಫಿ ಸಾಕ್ಷಿ ಆಗಿದ್ದಾರೆ ಎಂದರು.</p>.<p>ಪರೀಕ್ಷೆಯಲ್ಲಿ ಒಳಸಂಚು ನಡೆದಿದೆ. ಸಂದರ್ಶನ ರದ್ದು ಮಾಡಿ ಹೊಸದಾಗಿ ನಡೆಸಿ. ಪ್ರಾಮಾಣಿಕರಾಗಿದ್ದರೆ ಅವರಿಗೇ ಕೆಲಸ ಕೊಡಲಿ. ಓಎಂಆರ್ ಶೀಟ್ ನಮಗೆ ತಡವಾಗಿ ಸಿಕ್ಕಿದೆ. ಅದಕ್ಕೆ ಒಂದು ವರ್ಷ ಹಿಡಿಯಿತು. ದಾಖಲೆ ಇಟ್ಟುಕೊಂಡು ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು.</p>.<p>ಗೂಳಿಗಾನಹಳ್ಳಿ ನಾಗರಾಜ್ ಮಾತನಾಡಿ, ‘ಪ್ರಕರಣಕ್ಕೆ ಸಂಬಂಧಿಸಿದ ಕೋಮುಲ್ ಸಿಬ್ಬಂದಿಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಅನುಮತಿ ನೀಡುತ್ತಿಲ್ಲ’ ಎಂದು ದೂರಿದರು.</p>.<p>ಹೋರಾಟಗಾರ ರಮೇಶ್ ಬಾಬು ಮಾತನಾಡಿ, ಸಿಬ್ಬಂದಿಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲು ಕೋಮುಲ್ ಮೇಲಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಈ ಕೂಡಲೇ ಅದಕ್ಕೆ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-18-2009533376</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>