<p><strong>ಕೋಲಾರ:</strong> ನಗರದ ಬಂಗಾರಪೇಟೆ ರಸ್ತೆಯಲ್ಲಿರುವ ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ (ಆರ್ಟಿಒ) ಬಾಂಬ್ ಇರಿಸಿರುವುದಾಗಿ ಬೆದರಿಕೆಯ ಇ-ಮೇಲ್ ಸಂದೇಶ ಶುಕ್ರವಾರ ಬಂದಿದೆ. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ.</p>.<p>ಬೆಳಿಗ್ಗೆ 11.30 ರ ಸುಮಾರಿಗೆ ಕಚೇರಿಯ ಇ-ಮೇಲ್ಗೆ (rtoklr-ka@nic.in) ಈ ಸಂದೇಶ ಬಂದಿದೆ. gayathri_shabaz@hotmail.com ನಿಂದ ಸಂದೇಶ ಬಂದಿದ್ದು, ಕಚೇರಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸಲಾಗಿದೆ.</p>.<p>ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಗಾಬರಿಯಿಂದ ಕಚೇರಿ ಹೊರಗೆ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋಲಾರ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.</p>.<p>ಬೆಂಗಳೂರಿನ ಸಮೀಪದ ವೈದ್ಯಕೀಯ ಕಾಲೇಜಿನ ಪ್ರೊ.ಅಬ್ದುಲ್ ಮೊಹಮ್ಮದ್ ಅವರಿಗೆ ಆಗಿರುವ ಅವಮಾನವು ಎಲ್ಲಾ ಎಂ.ಕೆ.ಸ್ಟಾಲಿನ್ ಬೆಂಬಲಿಗರಿಗೆ ಮಾಡಿದ ಅವಮಾನವಾಗಿದೆ. ಆದ್ದರಿಂದ, ಮಧ್ಯಾಹ್ನ 2 ಗಂಟೆಗೆ ಇಸ್ಲಾಮಿಕ್ ಪ್ರಾರ್ಥನೆಯ ಸಮಯದಲ್ಲಿ ಆರ್ಟಿಒ ಕಚೇರಿಯಲ್ಲಿ 10 ಬಾಂಬ್ ಇಟ್ಟು ಸ್ಫೋಟಿಸಲಾಗುವುದು ಎಂಬ ಸಂದೇಶ ಆ ಇ–ಮೇಲ್ನಲ್ಲಿತ್ತು.</p>.<p>ಪೊಲೀಸರು, ಬಾಂಬ್ ಪತ್ತೆ ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಸಾರಿಗೆ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಕಟ್ಟಡ ಹಾಗೂ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.</p>.<p>ತಕ್ಷಣವೇ ಪ್ರವೇಶದ್ವಾರದ ಗೇಟ್ ಬಂದ್ ಮಾಡಿದರು. ಆವರಣದಲ್ಲಿದ್ದ ಯಾವುದೇ ವಾಹನವನ್ನು ಹೊರಗಡೆ ತೆಗೆದುಕೊಂಡು ಹೋಗಲು ಬಿಡಲಿಲ್ಲ. ಬಾಂಬ್ ನಿಷ್ಕ್ರಿಯ ದಳದವರು ಪ್ರತಿ ವಾಹನವನ್ನು ತಪಾಸಣೆ ಮಾಡಿದರು. ಕಚೇರಿ ಒಳಗೂ ಇಂಚಿಂಚು ಪರಿಶೀಲನೆ ನಡೆಸಿದರು. ಸುಮಾರು ಹೊತ್ತು ತಪಾಸಣೆ ನಡೆಸಿದ ನಂತರ ಇದು ಹುಸಿ ಬಾಂಬ್ ಸಂದೇಶ ಎಂಬುದು ಗೊತ್ತಾಯಿತು. ಸುತ್ತಮುತ್ತಲಿನ ಜನರು ಗುಂಪುಗೂಡಿ ಕುತೂಹಲದಿಂದ ವೀಕ್ಷಿಸಿದರು.</p>.<p>ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.</p>. <p><strong>ಹುಸಿ ಬಾಂಬ್ ಸಂದೇಶ: ಎಸ್ಪಿ</strong></p><p> ಇದೊಂದು ಹುಸಿ ಬಾಂಬ್ ಇ–ಮೇಲ್ ಆಗಿದೆ. ನಾವು ಮೂರು ತಂಡಗಳ ಮೂಲಕ ಇಡೀ ಕಟ್ಟಡ ತಪಾಸಣೆ ನಡೆಸಿದೆವು. ಕನ್ನಡದಲ್ಲಿಯೇ ಇ–ಮೇಲ್ ಬಂದಿದ್ದು 10 ಕಡೆ ಬಾಂಬ್ ಇಟ್ಟಿದ್ದು ಸ್ಫೋಟಿಸುವುದಾಗಿ ಹೇಳಿಕೊಂಡಿದ್ದರು. ತಕ್ಷಣವೇ ಸಿಬ್ಬಂದಿ ಹೊರಗಡೆ ಕಳಿಸಿ ಕಟ್ಟಡ ಹಾಗೂ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಎಲ್ಲೂ ಏನೂ ಸಿಗಲಿಲ್ಲ. ಇ–ಮೇಲ್ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಮೂರನೇ ಹುಸಿ ಬಾಂಬ್ ಸಂದೇಶ</strong> ಕಳೆದ ಮೂರ್ನಾಲ್ಕು ತಿಂಗಳಲ್ಲಿ ಕೋಲಾರ ಜಿಲ್ಲೆಗೆ ಬಂದಿರುವ ಮೂರನೇ ಬಾಂಬ್ ಬೆದರಿಕೆ ಇ–ಮೇಲ್ ಸಂದೇಶ ಇದಾಗಿದೆ. ಈ ಮೊದಲು ಎರಡು ಇ–ಮೇಲ್ಗಳು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದವು. ಇದು ಜಿಲ್ಲಾಡಳಿತಕ್ಕೆ ತಲೆ ನೋವು ತರಿಸಿತ್ತು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇ–ಮೇಲ್ ಜಾಡು ಪತ್ತೆ ಹಚ್ಚಲು ವಿಶೇಷ ತಂಡ ಕೂಡ ರಚಿಸಲಾಗಿತ್ತು. </p>.<p> <strong>ಇ–ಮೇಲ್ನಲ್ಲಿ ಏನಿದೆ?</strong></p><p> ತಮಿಳುನಾಡಿನ ಸಮಸ್ಯೆಗಳನ್ನು ತಮ್ಮ ಆರ್ಟಿಒ ಕಚೇರಿಗೆ ತಂದಿದ್ದಕ್ಕೆ ಕ್ಷಮಿಸಿ. ತಮಿಳುನಾಡು ಪತ್ರಕರ್ತರು ಉದಯನಿಧಿಯ ಸ್ಟಾಲಿನ್ ಗುಲಾಮರು ಎಂದು ಇ–ಮೇಲ್ನಲ್ಲಿ ಸಂದೇಶವಿದೆ. ತಮಿಳುನಾಡಿನ ರಾಜಕೀಯ ಮಹಿಳೆ ಮೇಲಿನ ಅತ್ಯಾಚಾರ ಅಲ್ಲಿನ ಮಾಧ್ಯಮಗಳು ಎನ್ಜಿಒಗಳು ಎಂದೆಲ್ಲಾ ನಮೂದಿಸಲಾಗಿದೆ. ‘ನಾವು (ತಮಿಳು ವಿಮೋಚನಾ ಸಂಸ್ಥೆ) ಚುನಾವಣೆಗಳಂಥ ಪ್ರಜಾಪ್ರಭುತ್ವ ಮಾರ್ಗಗಳಿಂದ ದೂರ ಸರಿದು ತಾಯಿ ತಮಿಳುನಾಡನ್ನು ಗುಂಡುಗಳು ಮತ್ತು ಬಾಂಬ್ಗಳಿಂದ ಸ್ವಚ್ಛಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಬರೆಯಲಾಗಿದೆ. 2026 ರ ಚುನಾವಣೆಯಲ್ಲಿ ಡಿಎಂಕೆ ಗೆದ್ದರೆ ಅವರು ಗೆಲುವಿನ ಉಡುಗೊರೆಯಾಗಿ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಳ್ಳುತ್ತಾರೆ ಎಂದೂ ಇ–ಮೇಲ್ನಲ್ಲಿ ಉಲ್ಲೇಖಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ನಗರದ ಬಂಗಾರಪೇಟೆ ರಸ್ತೆಯಲ್ಲಿರುವ ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ (ಆರ್ಟಿಒ) ಬಾಂಬ್ ಇರಿಸಿರುವುದಾಗಿ ಬೆದರಿಕೆಯ ಇ-ಮೇಲ್ ಸಂದೇಶ ಶುಕ್ರವಾರ ಬಂದಿದೆ. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ.</p>.<p>ಬೆಳಿಗ್ಗೆ 11.30 ರ ಸುಮಾರಿಗೆ ಕಚೇರಿಯ ಇ-ಮೇಲ್ಗೆ (rtoklr-ka@nic.in) ಈ ಸಂದೇಶ ಬಂದಿದೆ. gayathri_shabaz@hotmail.com ನಿಂದ ಸಂದೇಶ ಬಂದಿದ್ದು, ಕಚೇರಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸಲಾಗಿದೆ.</p>.<p>ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಗಾಬರಿಯಿಂದ ಕಚೇರಿ ಹೊರಗೆ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋಲಾರ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.</p>.<p>ಬೆಂಗಳೂರಿನ ಸಮೀಪದ ವೈದ್ಯಕೀಯ ಕಾಲೇಜಿನ ಪ್ರೊ.ಅಬ್ದುಲ್ ಮೊಹಮ್ಮದ್ ಅವರಿಗೆ ಆಗಿರುವ ಅವಮಾನವು ಎಲ್ಲಾ ಎಂ.ಕೆ.ಸ್ಟಾಲಿನ್ ಬೆಂಬಲಿಗರಿಗೆ ಮಾಡಿದ ಅವಮಾನವಾಗಿದೆ. ಆದ್ದರಿಂದ, ಮಧ್ಯಾಹ್ನ 2 ಗಂಟೆಗೆ ಇಸ್ಲಾಮಿಕ್ ಪ್ರಾರ್ಥನೆಯ ಸಮಯದಲ್ಲಿ ಆರ್ಟಿಒ ಕಚೇರಿಯಲ್ಲಿ 10 ಬಾಂಬ್ ಇಟ್ಟು ಸ್ಫೋಟಿಸಲಾಗುವುದು ಎಂಬ ಸಂದೇಶ ಆ ಇ–ಮೇಲ್ನಲ್ಲಿತ್ತು.</p>.<p>ಪೊಲೀಸರು, ಬಾಂಬ್ ಪತ್ತೆ ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಸಾರಿಗೆ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಕಟ್ಟಡ ಹಾಗೂ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.</p>.<p>ತಕ್ಷಣವೇ ಪ್ರವೇಶದ್ವಾರದ ಗೇಟ್ ಬಂದ್ ಮಾಡಿದರು. ಆವರಣದಲ್ಲಿದ್ದ ಯಾವುದೇ ವಾಹನವನ್ನು ಹೊರಗಡೆ ತೆಗೆದುಕೊಂಡು ಹೋಗಲು ಬಿಡಲಿಲ್ಲ. ಬಾಂಬ್ ನಿಷ್ಕ್ರಿಯ ದಳದವರು ಪ್ರತಿ ವಾಹನವನ್ನು ತಪಾಸಣೆ ಮಾಡಿದರು. ಕಚೇರಿ ಒಳಗೂ ಇಂಚಿಂಚು ಪರಿಶೀಲನೆ ನಡೆಸಿದರು. ಸುಮಾರು ಹೊತ್ತು ತಪಾಸಣೆ ನಡೆಸಿದ ನಂತರ ಇದು ಹುಸಿ ಬಾಂಬ್ ಸಂದೇಶ ಎಂಬುದು ಗೊತ್ತಾಯಿತು. ಸುತ್ತಮುತ್ತಲಿನ ಜನರು ಗುಂಪುಗೂಡಿ ಕುತೂಹಲದಿಂದ ವೀಕ್ಷಿಸಿದರು.</p>.<p>ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.</p>. <p><strong>ಹುಸಿ ಬಾಂಬ್ ಸಂದೇಶ: ಎಸ್ಪಿ</strong></p><p> ಇದೊಂದು ಹುಸಿ ಬಾಂಬ್ ಇ–ಮೇಲ್ ಆಗಿದೆ. ನಾವು ಮೂರು ತಂಡಗಳ ಮೂಲಕ ಇಡೀ ಕಟ್ಟಡ ತಪಾಸಣೆ ನಡೆಸಿದೆವು. ಕನ್ನಡದಲ್ಲಿಯೇ ಇ–ಮೇಲ್ ಬಂದಿದ್ದು 10 ಕಡೆ ಬಾಂಬ್ ಇಟ್ಟಿದ್ದು ಸ್ಫೋಟಿಸುವುದಾಗಿ ಹೇಳಿಕೊಂಡಿದ್ದರು. ತಕ್ಷಣವೇ ಸಿಬ್ಬಂದಿ ಹೊರಗಡೆ ಕಳಿಸಿ ಕಟ್ಟಡ ಹಾಗೂ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಎಲ್ಲೂ ಏನೂ ಸಿಗಲಿಲ್ಲ. ಇ–ಮೇಲ್ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಮೂರನೇ ಹುಸಿ ಬಾಂಬ್ ಸಂದೇಶ</strong> ಕಳೆದ ಮೂರ್ನಾಲ್ಕು ತಿಂಗಳಲ್ಲಿ ಕೋಲಾರ ಜಿಲ್ಲೆಗೆ ಬಂದಿರುವ ಮೂರನೇ ಬಾಂಬ್ ಬೆದರಿಕೆ ಇ–ಮೇಲ್ ಸಂದೇಶ ಇದಾಗಿದೆ. ಈ ಮೊದಲು ಎರಡು ಇ–ಮೇಲ್ಗಳು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದವು. ಇದು ಜಿಲ್ಲಾಡಳಿತಕ್ಕೆ ತಲೆ ನೋವು ತರಿಸಿತ್ತು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇ–ಮೇಲ್ ಜಾಡು ಪತ್ತೆ ಹಚ್ಚಲು ವಿಶೇಷ ತಂಡ ಕೂಡ ರಚಿಸಲಾಗಿತ್ತು. </p>.<p> <strong>ಇ–ಮೇಲ್ನಲ್ಲಿ ಏನಿದೆ?</strong></p><p> ತಮಿಳುನಾಡಿನ ಸಮಸ್ಯೆಗಳನ್ನು ತಮ್ಮ ಆರ್ಟಿಒ ಕಚೇರಿಗೆ ತಂದಿದ್ದಕ್ಕೆ ಕ್ಷಮಿಸಿ. ತಮಿಳುನಾಡು ಪತ್ರಕರ್ತರು ಉದಯನಿಧಿಯ ಸ್ಟಾಲಿನ್ ಗುಲಾಮರು ಎಂದು ಇ–ಮೇಲ್ನಲ್ಲಿ ಸಂದೇಶವಿದೆ. ತಮಿಳುನಾಡಿನ ರಾಜಕೀಯ ಮಹಿಳೆ ಮೇಲಿನ ಅತ್ಯಾಚಾರ ಅಲ್ಲಿನ ಮಾಧ್ಯಮಗಳು ಎನ್ಜಿಒಗಳು ಎಂದೆಲ್ಲಾ ನಮೂದಿಸಲಾಗಿದೆ. ‘ನಾವು (ತಮಿಳು ವಿಮೋಚನಾ ಸಂಸ್ಥೆ) ಚುನಾವಣೆಗಳಂಥ ಪ್ರಜಾಪ್ರಭುತ್ವ ಮಾರ್ಗಗಳಿಂದ ದೂರ ಸರಿದು ತಾಯಿ ತಮಿಳುನಾಡನ್ನು ಗುಂಡುಗಳು ಮತ್ತು ಬಾಂಬ್ಗಳಿಂದ ಸ್ವಚ್ಛಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಬರೆಯಲಾಗಿದೆ. 2026 ರ ಚುನಾವಣೆಯಲ್ಲಿ ಡಿಎಂಕೆ ಗೆದ್ದರೆ ಅವರು ಗೆಲುವಿನ ಉಡುಗೊರೆಯಾಗಿ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಳ್ಳುತ್ತಾರೆ ಎಂದೂ ಇ–ಮೇಲ್ನಲ್ಲಿ ಉಲ್ಲೇಖಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>