<p>ಶ್ರೀನಿವಾಸಪುರ: ಪಟ್ಟಣದ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಭಾನುವಾರ ವಾಸವಿ ಜಯಂತಿ ಅಂಗವಾಗಿ ದೇವಿಯ ಉತ್ಸವ ಮೂರ್ತಿಯ ಪಲ್ಲಕಿ ಉತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.</p>.<p>ಉತ್ಸವ ಮೂರ್ತಿ ಮೆರವಣಿಗೆ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಮಕ್ಕಳಿಂದ ವಾಸವಿ ಮಾತೆಯ ವೇಷಭೂಷಣ ಪ್ರದರ್ಶನ ಏರ್ಪಡಿಸಲಾಗಿತ್ತು.</p>.<p>ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಈ ಮಾತನಾಡಿ, ‘ದೇಶದ ಆರ್ಥಿಕಾಭಿವೃದ್ದಿಯಲ್ಲಿ ವೈಶ್ಯ ಸಮುದಾಯದ ಪಾತ್ರ ಹಿರಿದು. ಯಾವುದೇ ವಿವಾದಗಳಿಗೆ ಎಡೆಗೊಡದೆ, ತಮ್ಮ ವೃತ್ತಿಯಲ್ಲಿ ನಿರತರಾಗಿರುವುದು ಮಾದರಿ ನಡೆಯಾಗಿದೆ. ಅಹಿಂಸೆ ಹಾಗೂ ಸಾಮಾಜಿಕ ಹೊಂದಾಣಿಕೆ ಅವರ ವಿಶೇಷ ಗುಣವಾಗಿದೆ’ ಎಂದರು.</p>.<p>ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಆರ್ಯವೈಶ್ಯ ಸಮಾಜ ಶಿಸ್ತು ಮತ್ತು ಸಂಯಮಕ್ಕೆ ಹೆಸರಾಗಿದೆ. ದುಡಿಮೆ ಮತ್ತು ಲೆಕ್ಕಾಚಾರಕ್ಕೆ ಮಾದರಿಯಾಗಿದೆ, ಸಮಾಜದ ಎಲ್ಲ ಸಮುದಾಯಗಳ ಗೌರಕ್ಕೆ ಪಾತ್ರರಾಗಿದೆ’ ಎಂದು ಹೇಳಿದರು.</p>.<p>ಮುಖಂಡರಾದ ಬಿ.ವಿ.ಶಿವಾರೆಡ್ಡಿ, ತೂಪಲ್ಲಿ ನಾರಾಯಣಸ್ವಾಮಿ, ಶ್ರೀನಿವಾಸಪ್ಪ, ಆರ್ಯವೈಶ್ಯ ಮಂಡಳಿ ಮುಖಂಡರಾದ ಎಸ್.ಬಿ.ಅಮರನಾಥ್, ವೈಆರ್ಎಸ್ ಪ್ರಕಾಶ್, ಸೂರ್ಯನಾರಾಯಣಶೆಟ್ಟಿ, ಬದ್ರಿ, ಸಂಜಯ್, ಮ್ಯಾಂಗೋವ್ಯಾಲಿ ಅಮರನಾಥ್, ಸತ್ಯನಾರಾಯಣಶೆಟ್ಟಿ, ಅಂಜನಾದ್ರಿ, ನಾಗರಾಜ್, ಸೀತಾರಾಂ ಹಾಗೂ ಸಮುದಾಯದವರು ಇದ್ದರು.</p>.<p>ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಶನಿವಾರ ಕನ್ಯಕಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-18-668581506</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀನಿವಾಸಪುರ: ಪಟ್ಟಣದ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಭಾನುವಾರ ವಾಸವಿ ಜಯಂತಿ ಅಂಗವಾಗಿ ದೇವಿಯ ಉತ್ಸವ ಮೂರ್ತಿಯ ಪಲ್ಲಕಿ ಉತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.</p>.<p>ಉತ್ಸವ ಮೂರ್ತಿ ಮೆರವಣಿಗೆ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಮಕ್ಕಳಿಂದ ವಾಸವಿ ಮಾತೆಯ ವೇಷಭೂಷಣ ಪ್ರದರ್ಶನ ಏರ್ಪಡಿಸಲಾಗಿತ್ತು.</p>.<p>ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಈ ಮಾತನಾಡಿ, ‘ದೇಶದ ಆರ್ಥಿಕಾಭಿವೃದ್ದಿಯಲ್ಲಿ ವೈಶ್ಯ ಸಮುದಾಯದ ಪಾತ್ರ ಹಿರಿದು. ಯಾವುದೇ ವಿವಾದಗಳಿಗೆ ಎಡೆಗೊಡದೆ, ತಮ್ಮ ವೃತ್ತಿಯಲ್ಲಿ ನಿರತರಾಗಿರುವುದು ಮಾದರಿ ನಡೆಯಾಗಿದೆ. ಅಹಿಂಸೆ ಹಾಗೂ ಸಾಮಾಜಿಕ ಹೊಂದಾಣಿಕೆ ಅವರ ವಿಶೇಷ ಗುಣವಾಗಿದೆ’ ಎಂದರು.</p>.<p>ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಆರ್ಯವೈಶ್ಯ ಸಮಾಜ ಶಿಸ್ತು ಮತ್ತು ಸಂಯಮಕ್ಕೆ ಹೆಸರಾಗಿದೆ. ದುಡಿಮೆ ಮತ್ತು ಲೆಕ್ಕಾಚಾರಕ್ಕೆ ಮಾದರಿಯಾಗಿದೆ, ಸಮಾಜದ ಎಲ್ಲ ಸಮುದಾಯಗಳ ಗೌರಕ್ಕೆ ಪಾತ್ರರಾಗಿದೆ’ ಎಂದು ಹೇಳಿದರು.</p>.<p>ಮುಖಂಡರಾದ ಬಿ.ವಿ.ಶಿವಾರೆಡ್ಡಿ, ತೂಪಲ್ಲಿ ನಾರಾಯಣಸ್ವಾಮಿ, ಶ್ರೀನಿವಾಸಪ್ಪ, ಆರ್ಯವೈಶ್ಯ ಮಂಡಳಿ ಮುಖಂಡರಾದ ಎಸ್.ಬಿ.ಅಮರನಾಥ್, ವೈಆರ್ಎಸ್ ಪ್ರಕಾಶ್, ಸೂರ್ಯನಾರಾಯಣಶೆಟ್ಟಿ, ಬದ್ರಿ, ಸಂಜಯ್, ಮ್ಯಾಂಗೋವ್ಯಾಲಿ ಅಮರನಾಥ್, ಸತ್ಯನಾರಾಯಣಶೆಟ್ಟಿ, ಅಂಜನಾದ್ರಿ, ನಾಗರಾಜ್, ಸೀತಾರಾಂ ಹಾಗೂ ಸಮುದಾಯದವರು ಇದ್ದರು.</p>.<p>ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಶನಿವಾರ ಕನ್ಯಕಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-18-668581506</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>