<p><strong>ಬೇತಮಂಗಲ</strong>: ಸಮೀಪದ ಸುಂದರಪಾಳ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 1988-89ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಭಾನುವಾರ ಜರುಗಿತು.</p>.<p>37 ವರ್ಷಗಳ ನಂತರ ಒಂದೆಡೆ ಸೇರಿದ್ದ ಸ್ನೇಹಿತರು ಶಾಲಾ ದಿನಗಳನ್ನು ನೆನಪು ಹಾಕುತ್ತಾ, ಅಕ್ಷರ ಕಲಿಸಿದ ಗುರುಗಳನ್ನು ಸತ್ಕರಿಸಿದರು.</p>.<p>ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಗೋಪಿನಾಥ್ ಮಾತನಾಡಿ, ಒಂದು ಕಾಲದಲ್ಲಿ ಸುಂದರಪಾಳ್ಯ ಪ್ರೌಢಶಾಲೆಗೆ ಸರ್ಕಾರದಿಂದ ಯಾವುದೇ ಜಾಗ ಮಂಜೂರಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಪ್ರಯತ್ನಿಸಿ ಖಾಸಗಿ ಜಾಗವನ್ನು ಖರೀದಿಸಿದ್ದರು. ಅದರ ಫಲ ಇಂದು ಇಲ್ಲಿ ಬೃಹತ್ ಶಾಲಾ-ಕಾಲೇಜು ತಲೆಎತ್ತಿದೆ. ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡುತ್ತಿದೆ ಎಂದರು.</p>.<p>ಈ ವೇಳೆ ಮೃತರಾಗಿದ್ದ ನಿವೃತ್ತ ಶಿಕ್ಷಕರಾದ ಸುಬ್ಬಣ್ಣ, ವೀರಭದ್ರಯ್ಯ ಹಾಗೂ 1988-89ನೇ ಸಾಲಿನ ಬ್ಯಾಚ್ನಲ್ಲಿ ಅಗಲಿದ ಸಹಪಾಠಿಗಳ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿದರು.</p>.<p>ಶ್ರೀಧರ್, ಭಾಸ್ಕರ್ ಗೌಡ, ಉಮಾದೇವಿ, ಶಾಂತಮ್ಮ, ಶಿವಣ್ಣ, ಶ್ರೀನಿವಾಸ್ ಗೌಡ, ಜಯಲಕ್ಷ್ಮಿ, ವೆಂಗಸಂದ್ರ ವೆಂಕಟಾಚಲಪತಿ, ಶ್ರೀನಿವಾಸ್ ಮೂರ್ತಿ, ತಾಯಲೂರಪ್ಪ, ಶ್ರೀರಾಮ್, ರಾಧ, ವೆಂಕಟೇಶ್ ಸೇರಿದಂತೆ ಹಳೆ ವಿದ್ಯಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-18-496032814</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇತಮಂಗಲ</strong>: ಸಮೀಪದ ಸುಂದರಪಾಳ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 1988-89ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಭಾನುವಾರ ಜರುಗಿತು.</p>.<p>37 ವರ್ಷಗಳ ನಂತರ ಒಂದೆಡೆ ಸೇರಿದ್ದ ಸ್ನೇಹಿತರು ಶಾಲಾ ದಿನಗಳನ್ನು ನೆನಪು ಹಾಕುತ್ತಾ, ಅಕ್ಷರ ಕಲಿಸಿದ ಗುರುಗಳನ್ನು ಸತ್ಕರಿಸಿದರು.</p>.<p>ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಗೋಪಿನಾಥ್ ಮಾತನಾಡಿ, ಒಂದು ಕಾಲದಲ್ಲಿ ಸುಂದರಪಾಳ್ಯ ಪ್ರೌಢಶಾಲೆಗೆ ಸರ್ಕಾರದಿಂದ ಯಾವುದೇ ಜಾಗ ಮಂಜೂರಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಪ್ರಯತ್ನಿಸಿ ಖಾಸಗಿ ಜಾಗವನ್ನು ಖರೀದಿಸಿದ್ದರು. ಅದರ ಫಲ ಇಂದು ಇಲ್ಲಿ ಬೃಹತ್ ಶಾಲಾ-ಕಾಲೇಜು ತಲೆಎತ್ತಿದೆ. ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡುತ್ತಿದೆ ಎಂದರು.</p>.<p>ಈ ವೇಳೆ ಮೃತರಾಗಿದ್ದ ನಿವೃತ್ತ ಶಿಕ್ಷಕರಾದ ಸುಬ್ಬಣ್ಣ, ವೀರಭದ್ರಯ್ಯ ಹಾಗೂ 1988-89ನೇ ಸಾಲಿನ ಬ್ಯಾಚ್ನಲ್ಲಿ ಅಗಲಿದ ಸಹಪಾಠಿಗಳ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿದರು.</p>.<p>ಶ್ರೀಧರ್, ಭಾಸ್ಕರ್ ಗೌಡ, ಉಮಾದೇವಿ, ಶಾಂತಮ್ಮ, ಶಿವಣ್ಣ, ಶ್ರೀನಿವಾಸ್ ಗೌಡ, ಜಯಲಕ್ಷ್ಮಿ, ವೆಂಗಸಂದ್ರ ವೆಂಕಟಾಚಲಪತಿ, ಶ್ರೀನಿವಾಸ್ ಮೂರ್ತಿ, ತಾಯಲೂರಪ್ಪ, ಶ್ರೀರಾಮ್, ರಾಧ, ವೆಂಕಟೇಶ್ ಸೇರಿದಂತೆ ಹಳೆ ವಿದ್ಯಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-18-496032814</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>