ಕೋಲಾರ: ಕೋಲಾರ ಜಿಲ್ಲೆಯಲ್ಲಿ ಒಕ್ಕಲುತನ ಮಾಡುತ್ತಿರುವ ರೈತ ಯುವಕರ ಮದುವೆಗೆ ಯುವತಿಯರ ಕೊರತೆಯಿದ್ದು, ಬೇರೆ ಜಿಲ್ಲೆಯ ಅನುಕೂಲಸ್ಥರಿಗೆ ಇಲ್ಲಿನ ಯುವತಿಯರನ್ನು ಮದುವೆ ಮಾಡಿಕೊಡುವುದನ್ನು ನಿಷೇಧಿಸಬೇಕು ಎಂದು ಅವಿವಾಹಿತ ರೈತರೊಬ್ಬರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೇಡಿಕೆ ಇರಿಸಿದರು.
ಜೆಡಿಎಸ್ ಪಂಚರತ್ನ ಯಾತ್ರೆ ವೇಳೆ ತಾಲ್ಲೂಕಿನ ಮುದುವತ್ತಿ ಗ್ರಾಮದ ಯುವಕ ಧನಂಜಯ ಪತ್ರದ ಮೂಲಕ ಮನವಿ ಸಲ್ಲಿಸಿದರು..
'ಜಿಲ್ಲೆಯ ಯುವಕರಿಗೆ ವಧುಗಳ ಕೊರತೆ ನೀಗಿಸಲು ಜೆಡಿಎಸ್ ಅಧಿಕಾರಕ್ಕೆ ಬಂದ ಮೇಲೆ ಕ್ರಮ ವಹಿಸಬೇಕು. ನಿಯಮ ಜಾರಿ ಮಾಡಬೇಕು' ಎಂದು ಕೋರಿದರು.
' ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯುತ್ತಿಲ್ಲ. ಇದು ಈ ಭಾಗದ ಸಾಮಾಜಿಕ ಸಮಸ್ಯೆ ಆಗಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.