ಪರಿಣಾಮ ನೆಟ್ಟಗಿರುವುದಿಲ್ಲ: ‘ನನಗೆ ತೊಂದರೆ ಮಾಡಿದ ಮುನಿಯಪ್ಪಗೆ ಏಕೆ ಸಹಾಯ ಮಾಡಬೇಕು? ಅವರಿಗೆ ಬೇರೆ ರೀತಿ ತೊಂದರೆ ಮಾಡಲು ನನ್ನ ಕೈಯಲ್ಲಿ ಆಗಲ್ಲ. ನ್ಯಾಯಾಲಯ, ಪೊಲೀಸ್, ರೌಡಿಸಂ ಮೂಲಕ ಅವರನ್ನು ಬಗ್ಗು ಬಡಿಯುವುದು ಸಾಧ್ಯವಿಲ್ಲ. ಹೀಗಾಗಿ ಜನರ ಬಳಿ ಹೋಗಿ ಅವರ ವಿರುದ್ಧ ಪ್ರಚಾರ ಮಾಡುತ್ತಿದ್ದೇನೆ’ ಎಂದು ಹೇಳಿದರು.