ತಾಲ್ಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತ ಹೆಣ್ಣು ಮಗಳು ಕಬ್ಬಿಗೆ ಬೆಂಬಲ ಬೆಲೆ ಕೇಳಿದಾಗ ಎಲ್ಲಿ ಮಲಗಿದ್ದಿರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು. ಕೊಪ್ಪಳದಲ್ಲಿ ರೈತರು ಹೋರಾಟ ಮಾಡಿದ್ದಾಗ ತಾವು ತಮಗೆ ಮತ ಹಾಕಿಲ್ಲವೆಂದು ಬಾಲಿಷವಾಗಿ ಮಾತನಾಡಿದ್ದರು’ ಎಂದು ಟೀಕಿಸಿದರು.