ಗೋಮಾಳದ ಜಮೀನಿನ ಒಟ್ಟು ವಿಸ್ತೀರ್ಣವೆಷ್ಟು, ಅದರಲ್ಲಿ ಎಷ್ಟು ಜಮೀನು ಕೆಎಸ್ಸಿಎಗೆ ಹಸ್ತಾಂತರವಾಗಿದೆ, ಉಳಿದ ಜಮೀನು ಎಷ್ಟು ಎಂಬ ಬಗ್ಗೆ ತನಿಖೆ ನಡೆಸಬೇಕು. ದರಖಾಸ್ತು ಮೂಲಕ ಮಂಜೂರಾಗಿರುವ ಜಮೀನುಗಳಲ್ಲಿ ಎಷ್ಟು ಹೊಸ ಸರ್ವೆ ನಂಬರ್ಗಳಾಗಿವೆ ಎಂಬುದನ್ನು ಪರಿಶೀಲಿಸಿ ಗಣಕಿಕೃತ ಪಹಣಿಯ ದಾಖಲೆಪತ್ರಗಳೊಂದಿಗೆ ವರದಿ ನೀಡಿ ಉಪ ವಿಭಾಗಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.