ದಲ್ಲಾಳಿ ನೆರವು: ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಯು ಆರೋಪಿಗಳು ನೀಡಿದ ಜಮೀನಿನ ನಕಲಿ ದಾಖಲೆಪತ್ರ ಹಾಗೂ ಮಾರಾಟದ ಕ್ರಯಪತ್ರದ ಕಡತವನ್ನು ಸರಿಯಾಗಿ ಪರಿಶೀಲಿಸದೆ ಮೇಲಾಧಿಕಾರಿ ಸಹಿಗೆ ರವಾನಿಸಿದ್ದರು. ಮೇಲಾಧಿಕಾರಿ ಜಮೀನಿನ ಅಸಲಿ ದಾಖಲೆಪತ್ರ ಸಲ್ಲಿಸುವಂತೆ ಕೇಳಿದಾಗ ಆರೋಪಿಗಳು ದಾಖಲೆಪತ್ರ ಮನೆಯಲ್ಲಿದ್ದು, ತಂದು ಕೊಡುತ್ತೇವೆ ಸುಳ್ಳು ಹೇಳಿದ್ದರು. ಅಲ್ಲದೇ, ದಲ್ಲಾಳಿ ಮೂಲಕ ಕಡತಕ್ಕೆ ಮೇಲಾಧಿಕಾರಿಯ ಸಹಿ ಮಾಡಿಸಲು ಪ್ರಯತ್ನ ಪಟ್ಟಿದ್ದರು. ಮೇಲಾಧಿಕಾರಿ ಮಂಜುಳಮ್ಮ ಕಡತಕ್ಕೆ ಸಹಿ ಹಾಕದೆ ಬಾಕಿ ಇರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.