‘ಅನಕ್ಷರತೆ ಮತ್ತು ಕಾನೂನಿನ ಅರಿವಿಲ್ಲದ ಕಾರಣ ಜನರ ನಡುವೆ ಪರಸ್ಪರ ದ್ವೇಷ, ಭಿನ್ನಾಭಿಪ್ರಾಯ ಮೂಡಿ ಕಲಹವಾಗುತ್ತಿದೆ. ಇದನ್ನು ತಪ್ಪಿಸಲು ಪ್ರಾಧಿಕಾರ ನಿರಂತರವಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಸುತ್ತಿದೆ. ಬಾಲ್ಯವಿವಾಹ, ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ಕಾನೂನಿನ ಅರಿವಿಲ್ಲದೆ ತಪ್ಪು ನಡೆಯುತ್ತದೆ. ಸಂತ್ರಸ್ತರು ಆರ್ಥಿಕ ಶಕ್ತಿಯಿಲ್ಲದೆ ನೋವು ಸಹಿಸಿಕೊಂಡು ಬದುಕು ಸಾಗಿಸುವಂತಾಗಿದೆ. ಪ್ರಾಧಿಕಾರ ಇಂತಹವರಿಗೆ ಕಾನೂನು ನೆರವು ನೀಡಿ ಧೈರ್ಯ ತುಂಬುತ್ತಿದೆ’ ಎಂದು ವಿವರಿಸಿದರು.