ಡಿಸಿಸಿ ಬ್ಯಾಂಕ್ನಿಂದ ಫಲಾನುಭವಿಗಳಿಗೆ ನೇರವಾಗಿ ಸಾಲ ವಿತರಿಸುವ ಬದಲು ಸಾಲದ ಮೊತ್ತಕ್ಕೆ ಹಸುಗಳನ್ನು ಖರೀದಿಸಿ ಕೊಟ್ಟಿದ್ದರೆ ಅಥವಾ ಸಾಲದ ಹಣ ಸದ್ಬಳಕೆಯಾಗಿದ್ದರೆ ಹಾಲು ಉತ್ಪಾದನೆ ಕುಸಿಯುತ್ತಿರಲಿಲ್ಲ. ಸಾಲದ ಹಣ ದುರ್ಬಳಕೆಯಾಗಿರುವ ಬಗ್ಗೆ ಮತ್ತು ಸಾಲದಲ್ಲಿ ಖರೀದಿಸಿದ ಹಸುಗಳನ್ನು ಕದ್ದುಮುಚ್ಚಿ ಮಾರಾಟ ಮಾಡಿರುವ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.