ಕೋಲಾರ: ‘ಸಿದ್ದರಾಮಯ್ಯ ಪ್ರತಿ ಬಾರಿ ತಮ್ಮ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ. ಬಾದಾಮಿಯಲ್ಲೂ ಇದೇ ವಿಚಾರ ಹೇಳಿ ಕೋಲಾರಕ್ಕೆ ಬಂದಿದ್ದಾರೆ’ ಎಂದು ಸಚಿವ ಮುನಿರತ್ನ ಶನಿವಾರ ಇಲ್ಲಿ ಟೀಕಿಸಿದರು.
‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ನಾವು 10 ವಿದ್ಯೆ ಪ್ರಯೋಗಿಸಿದರೆ, ಅವರ ಸುತ್ತಮುತ್ತ ಇರುವವರು 20 ವಿದ್ಯೆ ಪ್ರಯೋಗಿಸುತ್ತಾರೆ. ಹೀಗಾಗಿ, ಅವರಿಗೆ ಸೋಲು ಖಚಿತ’ ಎಂದರು.
‘ತಾಕತ್ತಿದ್ದರೆ ಚಾಮುಂಡೇಶ್ವರಿಯಲ್ಲಿ ಗೆದ್ದು ತೋರಿಸಲಿ. ಇಲ್ಲದಿದ್ದರೆ ಡಿ.ಕೆ.ಶಿವಕುಮಾರ್ ಅವರು ತಮ್ಮ ಕನಕಪುರ ಕ್ಷೇತ್ರ ಬಿಟ್ಟುಕೊಡಲಿ. ಕೋಲಾರದ ಶಾಸಕ ಕೆ.ಶ್ರೀನಿವಾಸಗೌಡ ಏನು ಪಾಪ ಮಾಡಿದ್ದಾರೆ? ಜೆಡಿಎಸ್ನಿಂದ ಗೆದ್ದ ಅವರ ಸ್ಥಾನವನ್ನು ಏಕೆ ಕಿತ್ತುಕೊಂಡರು’ ಎಂದು ಪ್ರಶ್ನಿಸಿದರು.