ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಂಜೇಗೌಡರು ಟೀಕಿಸಿರುವಂತೆ ನಾನು ಗಾಳಿಯಲ್ಲಿ ಗೆದ್ದು ಬಂದವನಲ್ಲ. ಜಿಲ್ಲೆಯ ಜನ ಹಿಂದಿನ ಸಂಸದರ ದುರಾಡಳಿತದಿಂದ ಬೇಸತ್ತು ಪಕ್ಷಾತೀತವಾಗಿ ನನ್ನನ್ನು ಗೆಲ್ಲಿಸಿದ್ದಾರೆ. ನಂಜೇಗೌಡರ ಮಾಲೂರು ಕ್ಷೇತ್ರದಲ್ಲೇ ನನಗೆ 37 ಸಾವಿರ ಮತಗಳ ಮುನ್ನಡೆ ಬಂದಿದೆ. ಇದು ಗೊತ್ತಿದ್ದರೂ ವಿನಾಕಾರಣ ಮಾತನಾಡುವ ಅವರಿಗೆ ಲೋಕ ಜ್ಞಾನವಿಲ್ಲ’ ಎಂದು ವ್ಯಂಗ್ಯವಾಡಿದರು.