‘ದಿಗ್ಬಂಧನದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದೆ. ಮತ್ತೊಂದಡೆ ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತಗೊಂಡು ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಮಸ್ಯೆಯಾಗಿದೆ. ಈ ಕಾರಣಕ್ಕೆ ಜಿಲ್ಲೆಯ ರೈತರು ಧೃತಿಗೆಡಬಾರದು. ವೈಯಕ್ತಿಕವಾಗಿ ನಾನು ಹೂಕೋಸು, ಕ್ಯಾಪ್ಸಿಕಂ ಸೇರಿದಂತೆ ರೈತರ ತರಕಾರಿ ಖರೀದಿಸಿ ಬಡವರು ಹಾಗೂ ನಿರ್ಗತಿಕರಿಗೆ ಹಂಚುತ್ತೇನೆ’ ಎಂದು ಮುನಿಸ್ವಾಮಿ ಹೇಳಿದರು.