ಸದಸ್ಯರಾದ ಸಿ.ವಿ.ಗೋಪಾಲ್, ಮಾರಾಪ್ಪ ಮಾತನಾಡಿ, ಹಂಗಾಮು ಮುಗಿದರೂ ನೆಲಗಡಲೆ ಬಿತ್ತನೆ ಬೀಜ ರೈತರಿಗೆ ಸಿಕ್ಕಿಲ್ಲ ಎಂದು ದೂರಿದಾಗ, ಸಭೆಯಲ್ಲಿದ್ದ ಕೃಷಿ ಅಧಿಕಾರಿಗಳು, ‘ಕಳೆದ ವಾರ ಬಂದಿದ್ದ ಬಿತ್ತನೆ ಬೀಜ ಕಳಪೆ ಮಟ್ಟದ್ದಾಗಿದ್ದವು. ಅವುಗಳನ್ನು ವಾಪಸ್ಸು ಕಳುಹಿಸಲಾಗಿದೆ. ಮತ್ತೆ 450 ಕ್ವಿಂಟಲ್ ಬೀಜ ಬಂದಿದೆ. ಮುಂದಿನ ಸೋಮವಾರದಿಂದ ರೈತ ಸಂಪರ್ಕ ಕೇಂದ್ರದಿಂದ ಸರಬರಾಜು ಮಾಡುತ್ತೇವೆ’ ಎಂದು ಉತ್ತರಿಸಿದರು.