<p>ಮುಳಬಾಗಿಲು: ತಾಲ್ಲೂಕಿನ ವಿರುಪಾಕ್ಷಿ ಗ್ರಾಮದ ವಿರುಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಕಾಶಿಯ 28 ನಾಗಾ ಸಾಧುಗಳು ಇದೇ 28 ರಿಂದ ಏ.3ರವರೆಗೆ ಪೂಜೆ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.</p>.<p>ಗ್ರಾಮಕ್ಕೆ ಶನಿವಾರ ಬಂದ ನಾಗಾ ಸಾಧುಗಳನ್ನು ಸ್ವಾಗತಿಸಿ ನಗರದ ಆಂಜನೇಯ, ಕುರುಡುಮಲೆಯ ವಿನಾಯಕ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು ಪೂಜೆ ಸಲ್ಲಿಸಲಾಯಿತು.</p>.<p>ನಂತರ ನಗರದ ಕೆಇಬಿ ವೃತ್ತ, ಅಂಬೇಡ್ಕರ್ ವೃತ್ತ, ಬಜಾರು ಬೀದಿ, ಸೋಮೇಶ್ವರ ಪಾಳ್ಯ ಮೂಲಕ ವಿರುಪಾಕ್ಷಿ ಗ್ರಾಮದವರೆಗೆ ಮೆರವಣಿಗೆಯಲ್ಲಿ ಸಾಗಿದರು.</p>.<p>ವಿರುಪಾಕ್ಷೇಶ್ವರ ದೇವಾಲಯದಲ್ಲಿ ಗ್ರಾಮಸ್ಥರೊಂದಿಗೆ ಪೂಜೆ ಕುರಿತು ಚರ್ಚಿಸಿದ ಸಾಧುಗಳು ತಾವು ನಡೆಸಲಿರುವ ಮಹಾರುದ್ರಯಾಗ ಮತ್ತು ಏಕಕುಂಡ ಆತ್ಮ ಸಹಸ್ರಾರ್ಚನೆ ಸಿದ್ಧತೆ ಕುರಿತು ಚರ್ಚಿಸಿದರು.</p>.<p>ಲೋಕದಲ್ಲಿ ಎಂದಿಗೂ ಧರ್ಮ ಗೆಲ್ಲುತ್ತದೆ. ಅಧರ್ಮ ಸೋಲುತ್ತದೆ ಎಂದು ನಾಗಾ ಸಾಧು ಮಹಾಂತ ಓಂಪುರಿ ಹೇಳಿದರು. ನಂಗಲಿ ಸತೀಶ್ ಕುಮಾರ್, ವಕೀಲ ವಿ.ಜಯಪ್ಪ, ನಾಗಭೂಷಣ ಚಾರಿ ಮತ್ತಿತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-18-951732330</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಳಬಾಗಿಲು: ತಾಲ್ಲೂಕಿನ ವಿರುಪಾಕ್ಷಿ ಗ್ರಾಮದ ವಿರುಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಕಾಶಿಯ 28 ನಾಗಾ ಸಾಧುಗಳು ಇದೇ 28 ರಿಂದ ಏ.3ರವರೆಗೆ ಪೂಜೆ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.</p>.<p>ಗ್ರಾಮಕ್ಕೆ ಶನಿವಾರ ಬಂದ ನಾಗಾ ಸಾಧುಗಳನ್ನು ಸ್ವಾಗತಿಸಿ ನಗರದ ಆಂಜನೇಯ, ಕುರುಡುಮಲೆಯ ವಿನಾಯಕ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು ಪೂಜೆ ಸಲ್ಲಿಸಲಾಯಿತು.</p>.<p>ನಂತರ ನಗರದ ಕೆಇಬಿ ವೃತ್ತ, ಅಂಬೇಡ್ಕರ್ ವೃತ್ತ, ಬಜಾರು ಬೀದಿ, ಸೋಮೇಶ್ವರ ಪಾಳ್ಯ ಮೂಲಕ ವಿರುಪಾಕ್ಷಿ ಗ್ರಾಮದವರೆಗೆ ಮೆರವಣಿಗೆಯಲ್ಲಿ ಸಾಗಿದರು.</p>.<p>ವಿರುಪಾಕ್ಷೇಶ್ವರ ದೇವಾಲಯದಲ್ಲಿ ಗ್ರಾಮಸ್ಥರೊಂದಿಗೆ ಪೂಜೆ ಕುರಿತು ಚರ್ಚಿಸಿದ ಸಾಧುಗಳು ತಾವು ನಡೆಸಲಿರುವ ಮಹಾರುದ್ರಯಾಗ ಮತ್ತು ಏಕಕುಂಡ ಆತ್ಮ ಸಹಸ್ರಾರ್ಚನೆ ಸಿದ್ಧತೆ ಕುರಿತು ಚರ್ಚಿಸಿದರು.</p>.<p>ಲೋಕದಲ್ಲಿ ಎಂದಿಗೂ ಧರ್ಮ ಗೆಲ್ಲುತ್ತದೆ. ಅಧರ್ಮ ಸೋಲುತ್ತದೆ ಎಂದು ನಾಗಾ ಸಾಧು ಮಹಾಂತ ಓಂಪುರಿ ಹೇಳಿದರು. ನಂಗಲಿ ಸತೀಶ್ ಕುಮಾರ್, ವಕೀಲ ವಿ.ಜಯಪ್ಪ, ನಾಗಭೂಷಣ ಚಾರಿ ಮತ್ತಿತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-18-951732330</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>