<p><strong>ಮುಳಬಾಗಿಲು</strong>: ತಾಲ್ಲೂಕಿನ ಪದ್ಮಘಟ್ಟ ಬಳಿಯ ಆರ್ಟಿಒ ಸಾರಿಗೆ ತಪಾಸಣಾ ಕಚೇರಿ ಸಮೀಪದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಉರ್ದು ಶಾಲಾ ಕಟ್ಟಡ ಹಾಗೂ ಸಮುದಾಯ ಭವನ ಗಿಡಗಂಟಿಗಳಿಂದ ಆವರಿಸಿಕೊಂಡಿದ್ದು, ಪುಂಡ ಪೋಕರಿಗಳ ತಾಣವಾಗಿ ಬದಲಾಗಿದೆ.</p>.<p>ನಾಲ್ಕು ವರ್ಷಗಳ ಹಿಂದೆ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಮುದಾಯ ಭವನ ಹಾಗೂ ಉರ್ದು ಶಾಲಾ ಕಟ್ಟಡಕ್ಕೆ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಹಾಗಾಗಿ ಎರಡೂ ಕಟ್ಟಡಗಳು ಕುಡುಕರ ಹಾಗೂ ಬೆಟ್ಟಿಂಗ್ ದಂಧೆಕೋರರ ಅಡ್ಡೆಗಳಾಗಿ ಬದಲಾಗಿವೆ.</p>.<p>ಜೊತೆಗೆ ಇಲ್ಲಿಯವರೆಗೆ ಯಾವುದೇ ಕಾರ್ಯಕ್ರಮ ಅಥವಾ ಪಾಠ ಪ್ರವಚನ ನಡೆಯದ ಹಿನ್ನೆಲೆ ಕಟ್ಟಡ ಬಾಗಿಲು ತೆರೆಯದೆ ಭೂತ ಬಂಗಲೆಯಂತಾಗಿದೆ.</p>.<p>ಎರಡೂ ಕಟ್ಟಡಗಳನ್ನು ಯಾರೂ ಸ್ವಚ್ಛಗೊಳಿಸದ ಹಿನ್ನೆಲೆ ಗಿಡಗಂಟಿಗಳು ಕಟ್ಟಡಗಳನ್ನು ಆವರಿಸಿದೆ. ಸುಸಜ್ಜಿತ ರೀತಿಯಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಸ್ಥಳೀಯರಿಗೆ ಕಾಳಜಿ ಇಲ್ಲದ ಹಿನ್ನೆಲೆ ಲಕ್ಷಾಂತರ ವೆಚ್ಚದ ಯೋಜನೆ ವ್ಯರ್ಥವಾಗುತ್ತಿದೆ. </p>.<p>ಪದ್ಮಘಟ್ಟ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾ ಕಟ್ಟಡದ ಪ್ರಾಂಗಣದಲ್ಲಿ ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಕೇವಲ ಒಂದೇ ಒಂದು ಕೋಣ ಮಾತ್ರ ಇತ್ತು. ಅದರಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ, ಶಿಕ್ಷಕರ ಕಚೇರಿ ಕೆಲಸ ಹಾಗೂ ಬಿಸಿಯೂಟಕ್ಕೆ ತೊಂದರೆಯಾಗುತ್ತಿತ್ತು. ಹಾಗಾಗಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಯಿತು. ಆದರೆ, ಗ್ರಾಮದಿಂದ ನೂತನ ಕಟ್ಟಡ ದೂರವಿದೆ. ಜೊತೆಗೆ ಶಾಲೆ ಬಳಿಗೆ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಹೋಗಿ ಬರಲು ಉತ್ತಮ ರಸ್ತೆಯಿಲ್ಲದ ಕಾರಣ ಆ ಶಾಲೆಯ ಬಗ್ಗೆ ಯಾರೂ ಯೋಚಿಸಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ. </p>.<p>ಕಟ್ಟಡದ ಸುತ್ತಲೂ ಗಿಡಗಂಟಿ ಬೆಳೆದಿದ್ದು, ಕುಡುಕರು ಮದ್ಯಪಾನ ಮತ್ತು ಇಸ್ಪೀಟ್ ಆಡುತ್ತಾ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡು ಮಾಡಿದ್ದಾರೆ. ಜೊತೆಗೆ ಸಮುದಾಯ ಭವನವೂ ಗಿಡಗಂಟಿಗಳಿಂದ ಆವರಿಸಿದ್ದು, ವಿಷಕಾರಿ ಜಂತುಗಳ ಆವಾಸ ತಾಣವಾಗಿದೆ.</p>.<p>ಈ ಕಟ್ಟಡಗಳ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.</p>.<p> <strong>ಪದ್ಮಘಟ್ಟ ಗ್ರಾಮದ ಉರ್ದು ಶಾಲೆಯನ್ನು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡದೆ ಇರುವ ಕುರಿತು ಸಿಆರ್ಪಿಗಳಿಂದ ಮಾಹಿತಿ ಪಡೆಯಲಾಗುವುದು.</strong></p><p><strong>– ಪಿ.ಸೋಮೇಶ್ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ</strong></p>.<p><strong>ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದು ಪದ್ಮಘಟ್ಟ ಬಳಿ ನಿರ್ಮಿಸಲಾಗಿರುವ ಕಟ್ಟಡಗಳ ಕುರಿತು ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಪರಿಶೀಲಿಸಲಾಗುವುದು. </strong></p><p><strong>–ಎನ್.ಎಂ.ಬಾಬು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು</strong>: ತಾಲ್ಲೂಕಿನ ಪದ್ಮಘಟ್ಟ ಬಳಿಯ ಆರ್ಟಿಒ ಸಾರಿಗೆ ತಪಾಸಣಾ ಕಚೇರಿ ಸಮೀಪದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಉರ್ದು ಶಾಲಾ ಕಟ್ಟಡ ಹಾಗೂ ಸಮುದಾಯ ಭವನ ಗಿಡಗಂಟಿಗಳಿಂದ ಆವರಿಸಿಕೊಂಡಿದ್ದು, ಪುಂಡ ಪೋಕರಿಗಳ ತಾಣವಾಗಿ ಬದಲಾಗಿದೆ.</p>.<p>ನಾಲ್ಕು ವರ್ಷಗಳ ಹಿಂದೆ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಮುದಾಯ ಭವನ ಹಾಗೂ ಉರ್ದು ಶಾಲಾ ಕಟ್ಟಡಕ್ಕೆ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಹಾಗಾಗಿ ಎರಡೂ ಕಟ್ಟಡಗಳು ಕುಡುಕರ ಹಾಗೂ ಬೆಟ್ಟಿಂಗ್ ದಂಧೆಕೋರರ ಅಡ್ಡೆಗಳಾಗಿ ಬದಲಾಗಿವೆ.</p>.<p>ಜೊತೆಗೆ ಇಲ್ಲಿಯವರೆಗೆ ಯಾವುದೇ ಕಾರ್ಯಕ್ರಮ ಅಥವಾ ಪಾಠ ಪ್ರವಚನ ನಡೆಯದ ಹಿನ್ನೆಲೆ ಕಟ್ಟಡ ಬಾಗಿಲು ತೆರೆಯದೆ ಭೂತ ಬಂಗಲೆಯಂತಾಗಿದೆ.</p>.<p>ಎರಡೂ ಕಟ್ಟಡಗಳನ್ನು ಯಾರೂ ಸ್ವಚ್ಛಗೊಳಿಸದ ಹಿನ್ನೆಲೆ ಗಿಡಗಂಟಿಗಳು ಕಟ್ಟಡಗಳನ್ನು ಆವರಿಸಿದೆ. ಸುಸಜ್ಜಿತ ರೀತಿಯಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಸ್ಥಳೀಯರಿಗೆ ಕಾಳಜಿ ಇಲ್ಲದ ಹಿನ್ನೆಲೆ ಲಕ್ಷಾಂತರ ವೆಚ್ಚದ ಯೋಜನೆ ವ್ಯರ್ಥವಾಗುತ್ತಿದೆ. </p>.<p>ಪದ್ಮಘಟ್ಟ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾ ಕಟ್ಟಡದ ಪ್ರಾಂಗಣದಲ್ಲಿ ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಕೇವಲ ಒಂದೇ ಒಂದು ಕೋಣ ಮಾತ್ರ ಇತ್ತು. ಅದರಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ, ಶಿಕ್ಷಕರ ಕಚೇರಿ ಕೆಲಸ ಹಾಗೂ ಬಿಸಿಯೂಟಕ್ಕೆ ತೊಂದರೆಯಾಗುತ್ತಿತ್ತು. ಹಾಗಾಗಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಯಿತು. ಆದರೆ, ಗ್ರಾಮದಿಂದ ನೂತನ ಕಟ್ಟಡ ದೂರವಿದೆ. ಜೊತೆಗೆ ಶಾಲೆ ಬಳಿಗೆ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಹೋಗಿ ಬರಲು ಉತ್ತಮ ರಸ್ತೆಯಿಲ್ಲದ ಕಾರಣ ಆ ಶಾಲೆಯ ಬಗ್ಗೆ ಯಾರೂ ಯೋಚಿಸಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ. </p>.<p>ಕಟ್ಟಡದ ಸುತ್ತಲೂ ಗಿಡಗಂಟಿ ಬೆಳೆದಿದ್ದು, ಕುಡುಕರು ಮದ್ಯಪಾನ ಮತ್ತು ಇಸ್ಪೀಟ್ ಆಡುತ್ತಾ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡು ಮಾಡಿದ್ದಾರೆ. ಜೊತೆಗೆ ಸಮುದಾಯ ಭವನವೂ ಗಿಡಗಂಟಿಗಳಿಂದ ಆವರಿಸಿದ್ದು, ವಿಷಕಾರಿ ಜಂತುಗಳ ಆವಾಸ ತಾಣವಾಗಿದೆ.</p>.<p>ಈ ಕಟ್ಟಡಗಳ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.</p>.<p> <strong>ಪದ್ಮಘಟ್ಟ ಗ್ರಾಮದ ಉರ್ದು ಶಾಲೆಯನ್ನು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡದೆ ಇರುವ ಕುರಿತು ಸಿಆರ್ಪಿಗಳಿಂದ ಮಾಹಿತಿ ಪಡೆಯಲಾಗುವುದು.</strong></p><p><strong>– ಪಿ.ಸೋಮೇಶ್ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ</strong></p>.<p><strong>ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದು ಪದ್ಮಘಟ್ಟ ಬಳಿ ನಿರ್ಮಿಸಲಾಗಿರುವ ಕಟ್ಟಡಗಳ ಕುರಿತು ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಪರಿಶೀಲಿಸಲಾಗುವುದು. </strong></p><p><strong>–ಎನ್.ಎಂ.ಬಾಬು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>