ಇದಕ್ಕೆ ಸಿಡಿಮಿಡಿಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ‘ಸಭೆಯಲ್ಲಿ ಮಾತನಾಡಲು ನೀನು ಅರ್ಹನಲ್ಲ. ಮೊದಲು ಕುಳಿತುಕೋ’ ಎಂದು ಏರು ದನಿಯಲ್ಲಿ ಗದರಿದರು. ಇದರಿಂದ ಅಸಮಾಧಾನಗೊಂಡ ರಾಜೇಶ್, ‘ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕೋವಿಡ್ ಮಹಾಮಮಾರಿಯಿಂದ ಜನ ರೋಸಿ ಹೋಗಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಸೋಂಕು ನಿಯಂತ್ರಣಕ್ಕೆ ಕೆಲಸ ಮಾಡೋಣ’ ಎಂದರು.