ತಾಲ್ಲೂಕಿನ ವೇಮಗಲ್ ಹೋಬಳಿಯ ಎಂ.ಮಲ್ಲಾಂಡಹಳ್ಳಿಯ ನಾಗೇಶ್ ಅದೇ ಗ್ರಾಮದ ಗೋಪಾಲಕೃಷ್ಣ ಎಂಬುವರನ್ನು 2019ರ ಮೇ 3ರಂದು ಕೊಲೆ ಮಾಡಿದ್ದ. ಗೋಪಾಲಕೃಷ್ಣ ಮತ್ತು ನಾಗೇಶ್ ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ನಾಗೇಶ್, ರಾತ್ರಿ ಮನೆಯ ಮುಂದೆ ಮಲಗಿದ್ದ ಗೋಪಾಲಕೃಷ್ಣ ಅವರ ತಲೆಗೆ ಮರದ ತುಂಡಿನಿಂದ ಹೊಡೆದು ಕೊಲೆ ಮಾಡಿದ್ದ.