ಸೋಮವಾರ ಮುಂಜಾನೆ ಮದ್ಯಕ್ಕಾಗಿ ಹುಡುಕಾಡಿ ಸಿಗದೆ ಇದ್ದುದ್ದರಿಂದ ಚಾಕುವಿನಿಂದ ಕತ್ತನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ರಕ್ತಸ್ರಾವದಿಂದ ಚೀರಾಟ ಮಾಡುತ್ತಿದ್ದಾಗ ಮನೆಯವರು ನೋಡಿ ನಂಗಲಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಕತ್ತು ಅರ್ಧ ಭಾಗ ಸೀಳಿ ವಿಪರೀತ ರಕ್ತಸ್ರಾವವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಾಲಪ್ಪ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಲಾಗಿದೆ ಎಂದು ಸಂಬಂಧಿಕರು ತಿಳಿಸಿದರು.