ದೂರು ಏನು?: ಮುಬಾರಕ್ ಅವರು ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಳಿಗೆಗಳನ್ನು ಹರಾಜು ಮಾಡದೆ ಶೇಕಡವಾರು ದರ ನಿಗದಿಪಡಿಸಿ ಈ ಹಿಂದೆ ಕರಾರು ಮಾಡಿಕೊಂಡಿರುವ ಬಾಡಿಗೆದಾರರಲ್ಲದ ವ್ಯಕ್ತಿಗಳಿಗೆ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟು ಅಕ್ರಮ ಎಸಗಿದ್ದಾರೆ. ಸರ್ಕಾರದ ನಿಯಮಾವಳಿ, ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 72(2)ರ ಅನ್ವಯ ಕ್ರಮ ಕೈಗೊಳ್ಳದೆ ಮಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಪ್ರವೀಣ್ಗೌಡ ದೂರಿನಲ್ಲಿ ಆರೋಪಿಸಿದ್ದರು.