ಸೋಂಕಿತ ವ್ಯವಸ್ಥಾಪಕರ ಜತೆ ಮಂಡಿ ಮಾಲೀಕರು ಹಾಗೂ ಕೆಲಸಗಾರರು ಸಂಪರ್ಕಕ್ಕೆ ಬಂದಿರುವುದು ಆರೋಗ್ಯ ಇಲಾಖೆಯ ಪರಿಶೀಲನೆಯಿಂದ ಗೊತ್ತಾಗಿತ್ತು. ಹೀಗಾಗಿ ಕೆಲಸಗಾರರನ್ನು ಬುಧವಾರವೇ ಕ್ವಾರಂಟೈನ್ ಮಾಡಿತ್ತು. ಆದರೆ, ಮಂಡಿ ಮಾಲೀಕರನ್ನು ಕ್ವಾರಂಟೈನ್ ಮಾಡಿರಲಿಲ್ಲ. ಸಿಎಂಆರ್ ಮಂಡಿಯು ಎಪಿಎಂಸಿಯಲ್ಲಿ ಅತಿ ದೊಡ್ಡ ಮಂಡಿಯಾಗಿದ್ದು, ನೂರಾರು ರೈತರು, ವರ್ತಕರು ಹಾಗೂ ದಲ್ಲಾಳಿಗಳು ಗುರುವಾರ ಟೊಮೆಟೊ ಹರಾಜಿನಲ್ಲಿ ಭಾಗಿಯಾಗಿರುವುದು ಆತಂಕ ಹೆಚ್ಚಿಸಿದೆ.