ವೀರಗಾಸೆ, ಡೊಳ್ಳು ಕುಣಿತ, ತಮಟೆ, ಡೋಲು, ಕೀಲುಕುದುರೆ, ಕೋಲಾಟ, ಗಾರುಡಿ ಗೊಂಬೆ ಕಲಾವಿದರು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದರು. ಗಣ್ಯರು ಹಾಗೂ ಅಧಿಕಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕನ್ನಡಪರ ಸಂಘಟನೆಗಳ ಸದಸ್ಯರು ಹಾಗೂ ಯುವಕರು ಮೆರವಣಿಗೆ ಉದ್ದಕ್ಕೂ ಕುಣಿದು ಸಂಭ್ರಮಿಸಿದರು. ಕನ್ನಡ ನಾಡು, ನುಡಿಯ ವೈವಿಧ್ಯತೆ ಸಾರುವ ಗೀತೆಗಳು ಮೆರವಣಿಗೆಯನ್ನು ಅರ್ಥಪೂರ್ಣಗೊಳಿಸಿದವು.