ಹಸಿರು ವಲಯ: ‘ಕೋಲಾರವನ್ನು ಕೊರೊನಾ ಸೋಂಕು ಇಲ್ಲದ ಹಸಿರು ವಲಯದ ಜಿಲ್ಲೆಯೆಂದು ಸರ್ಕಾರ ಘೋಷಿಸಿದೆ. ಇದರ ಹಿಂದೆ ಎಲ್ಲರ ಸಹಕಾರವಿದೆ. ಪೊಲೀಸರು, ಅಧಿಕಾರಿಗಳು ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರ ಪರಿಶ್ರಮವಿದೆ. ಅವರ ಸೇವೆ ಗೌರವಿಸೋಣ. ಜಿಲ್ಲೆಯಲ್ಲಿ ಸೋಂಕು ನುಸುಳದಂತೆ ಎಚ್ಚರಿಕೆ ವಹಿಸೋಣ. ಸೋಂಕು ತಡೆಗೆ ಕೈಗಾರಿಕೋದ್ಯಮಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.