ಗೋಪಿ ಅವರು ಬರ ಪರಿಸ್ಥಿತಿ ನಡುವೆಯೂ ತಮ್ಮ 2 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕ್ಯಾಪ್ಸಿಕಂ ಬೆಳೆದಿದ್ದರು. ಆದರೆ, ದಿಗ್ಬಂಧನ ಆದೇಶದಿಂದ ತರಕಾರಿ ಸಾಗಣೆ ಮತ್ತು ವಹಿವಾಟಿನಲ್ಲಿ ವ್ಯತ್ಯಯವಾಗಿ ಕ್ಯಾಪ್ಸಿಕಂ ಬೆಲೆ ಏಕಾಏಕಿ ಕುಸಿತ ಕಂಡಿದೆ. ಕೊಯ್ಲಿಗೆ ಬಂದಿದ್ದ ಕ್ಯಾಪ್ಸಿಕಂ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ಗೋಪಿ ಮನನೊಂದಿದ್ದರು.