ಡಿ.ಕೆ.ಶಿವಕುಮಾರ್ ಏಸು ಪ್ರತಿಮೆ ಸ್ಥಾಪನೆ ವಿವಾದಕ್ಕೆ ಪ್ರತಿಕ್ರಿಯಿಸಿ, ‘ಪ್ರತಿಮೆ ಸ್ಥಾಪನೆ ಮಾಡಲಿ ಬಿಡಿ ಅದು ಒಳ್ಳೆಯ ಕಾರ್ಯವಲ್ಲವೇ. ನಾನೂ ಸಹ ಚರ್ಚ್ಗಳಿಗೆ, ಮಸೀದಿಗಳಿಗೆ ಹೋಗುತ್ತೇನೆ. ಅವರವರ ಭಕ್ತಿ ಅವರದು, ಹಿಂದು ಮುಸ್ಲಿಂ, ಕ್ರೈಸ್ತರೆಲ್ಲರು ಒಂದೇ. ಎಲ್ಲರೂ ಮನುಷ್ಯರೇ ಎಂಬ ಭಾವನೆ ನಮ್ಮಲಿ ಬೆಳೆಯಬೇಕು’ ಎಂದು ಹೇಳಿದರು.