ಮುಳಬಾಗಿಲು: ಗೋಹತ್ಯೆ ನಿಷೇಧ ವಿರೋಧಿಸಿ ತಾಲ್ಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಜ.11ರ ಸೋಮವಾರ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.
ರಾಜ್ಯ ದಸಂಸ (ಸಂಯೋಜಕ) ಅಧ್ಯಕ್ಷ ಡಾ. ಸಂಗಸಂದ್ರ ವಿಜಯಕುಮಾರ್, ದಸಂಸ ಜಿಲ್ಲಾ ಮುಖಂಡ ಮೆಕಾನಿಕ್ ಶ್ರೀನಿವಾಸ್, ಕಪ್ಪಲಮೊಡಗು ಶಂಕರ್, ದಸಂಸ (ಭೀಮವಾದ) ಮುಖಂಡ ಮುನಿವೆಂಕಟಪ್ಪ, ಎಸ್ಎಫ್ಐ ಜಿಲ್ಲಾಧ್ಯಕ್ಷ ಅಂಬ್ಲಿಕಲ್ ಶಿವಪ್ಪ, ರೈತ ಮುಖಂಡ ಕೃಷ್ಣಾರೆಡ್ಡಿ ಇದ್ದರು.