ಸಚಿವ ಸೋಮಣ್ಣ ಕಣ್ಣೀರಿಟ್ಟ ಬಗ್ಗೆ ಪ್ರತಿಕ್ರಿಯಿಸಿ, ‘ಸೋಮಣ್ಣ ಅವರಿಗೆ ಅಸಮಾಧಾನವಿದೆ ಎಂದು ಯಾರು ಹೇಳಿದ್ದಾರೆ? ಕೆಲವು ಬಾರಿ ಆನಂದಕ್ಕೂ ಕಣ್ಣಲ್ಲಿ ನೀರು ಬರುತ್ತದೆ. ದುಃಖದ ಕಣ್ಣೀರು ಎಂದು ಭಾವಿಸಬೇಡಿ. ಅವರ ಪುತ್ರನ ಬಗ್ಗೆ ಗೌರವವಿದೆ. ಆದರೆ, ಅವರು ಏನು ಮಾತನಾಡಿದ್ದಾರೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.