ಹೆಚ್ಚಿದ ಸಿರಿಧಾನ್ಯ
ಈ ಬಾರಿ ಅವರೆ ಗಿಡಗಳು ಹುಲುಸಾಗಿ ಬೆಳೆದಿವೆ. ಕೆಲವು ರೈತರು ಸಾಂಪ್ರದಾಯಿಕ ರಾಗಿ ಹೊಲಗಳಲ್ಲಿ ಅವರೆ, ಹುಚ್ಚೆಳ್ಳು, ಸಾಸಿವೆ, ಬಿಳಿ ಜೋಳ, ಅರೆಸಾಮೆ, ನವಣೆ, ಸಜ್ಜೆ ಮುಂತಾದ ಬೆಳೆಗಳನ್ನು ಸಾಲುಗಳಲ್ಲಿ ಬೆಳೆದಿದ್ದಾರೆ. ಬದುಗಳ ಪಕ್ಕದಲ್ಲಿ ಸಾರಿಗೆ ಬೇಕಾದ ತೊಗರಿ, ಅಲಸಂದೆ ಗಿಡ ಬೆಳೆಸಿದ್ದಾರೆ. ಶ್ರೀನಿವಾಸಪುರದ ಹೊರ ವಲಯದ ಗ್ರಾಮಗಳ ಕೆಲವು ರೈತರು ಸಾಮೆ, ನವಣೆಯನ್ನು ಪ್ರತ್ಯೇಕ ತಾಕುಗಳಲ್ಲಿ ಬೆಳೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿರಿ ಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ಬಂದಿರುವುದರಿಂದ ಈ ಬೆಳವಣಿಗೆ ಕಂಡುಬಂದಿದೆ.