ತಮ್ಮ 17ವಯಸ್ಸಿನಿಂದಲೇ ಮಾಸ್ತಿ ವೆಂಕಟರಮಣಸ್ವಾಮಿ ದೇಗುಲದಲ್ಲಿ ನಾದಸ್ವರ ವಾದಕರಾಗಿ ಕಲಾ ಸೇವೆ ಆರಂಭಿಸಿದ ಅವರು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಜಾನಪದ ಜಾತ್ರೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳು ಹಾಗೂ ಹೆಸರಾದಂತ ದೇವಾಲಯಗಳಲ್ಲಿ ನಾದಸ್ವರ ಕಾರ್ಯಕ್ರಮ ನೀಡುತ್ತಾ ಬಂದಿರುವ ಇವರು ಡೋಲ್ ಚಕ್ರವರ್ತಿ ಡಾ.ಮುನಿರತ್ನಂ, ತಂಜಾವೂರು ಟಿ.ಆರ್.ಗೋವಿಂದರಾಜನ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕಲಾವಿದರ ಜತೆಯಲ್ಲೂ ನಾದಸ್ವರ ಕಾರ್ಯಕ್ರಮ ನೀಡುವ ಹೆಗ್ಗಳಿಕೆ ಇವರದ್ದಾಗಿದೆ.