ಕೋಲಾರ: ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ವಿಶೇಷ ವಾತಾವರಣ ನಿರ್ಮಾಣವಾಗಿತ್ತು. ಜೈಲು ಹಕ್ಕಿಗಳ ಮೊಗದಲ್ಲಿ ಹೊಸ ಹುರುಪು ಕಂಡುಬಂತು. ರಾಖಿಕಟ್ಟಿಸಿಕೊಂಡು ಸಿಹಿ ಸವಿದರು, ಹಿತವಚನಗಳಿಗೆ ಕಿವಿಯಾದರು.
ರಕ್ಷಾ ಬಂಧನ ಪ್ರಯುಕ್ತ ಜಿಲ್ಲಾ ಕಾರಾಗೃಹದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಪ್ರತಿನಿಧಿಗಳು ವಿಚಾರಣಾಧೀನ ಕೈದಿಗಳಿಗೆ ರಾಖಿಕಟ್ಟಿ ಶುಭ ಹಾರೈಸಿದರು.
ಎಲ್ಲರೂ ಸಾಲಾಗಿ ನಿಂತು ರಾಕಿ ಕಟ್ಟಿಸಿಕೊಂಡರು. ಕೆಲವರು ಕಾಲಿಗೆ ಬಿದ್ದು ನಮಸ್ಕರಿಸಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು. ಜೈಲಿನ ಆವರಣದಲ್ಲಿ ಶಾಂತಿಯಿಂದ ಕುಳಿತು ಹಿತವಚನ ಆಲಿಸಿದರು.
ಕಾರಾಗೃಹದಲ್ಲಿ ಸದ್ಯ 12 ಮಹಿಳೆಯರು ಸೇರಿದಂತೆ 152 ಮಂದಿ ವಿಚಾರಣಾಧೀನ ಕೈದಿಗಳು ಇದ್ದಾರೆ.