‘ತಂತಿಗಳು ಕೈಗೆಟುಕುವ ಅಂತರದಲ್ಲಿವೆ. ಇದರಿಂದ ಮನೆಯ ಮಹಡಿ ಮೇಲೆ ಹತ್ತಲು ಭಯಭೀತರಾಗಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದ ಮನೆಯೊಂದರ ಸುತ್ತಮುತ್ತ ವಿದ್ಯುತ್ ಪ್ರವಹಿಸಿದ ಅನುಭವವಾಗಿದ್ದು, ಮಳೆ ಸ್ಥಗಿತಗೊಳ್ಳುವವರೆಗೂ ಮನೆಗಳನ್ನು ಬಿಟ್ಟು ಬೇರೆಡೆ ಹೋಗಿ ವಾಸ್ತವ್ಯ ಹೂಡಿದ್ದೇವು’ ಎಂದು ಆಂಜಿನಪ್ಪ ಮತ್ತು ಮುನಿರಾಜು ಕುಟುಂಬದ ಸದಸ್ಯರು ಅಳಲು ತೋಡಿಕೊಂಡರು.