ಮಧ್ಯಾಹ್ನದ ವೇಳೆಗೆ ವರ್ತಕರು ನಗರಸಭೆಗೆ ಸೇರುವ ಕೋರಮಂಡಲ್ ಟೋಲ್ಗೇಟ್ ಬಳಿಯ ಕೆಜಿಎಫ್–ಬಂಗಾರಪೇಟೆ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಪೇಮೆಂಟ್ ಮಾರುಕಟ್ಟೆ ಸ್ಥಾಪಿಸಿದರು. ಬೆಮಲ್ ನಗರ ಪೊಲೀಸರು ಕೂಡ ಮೌನವಾಗಿದ್ದರು. ಮುಖ್ಯರಸ್ತೆಯಲ್ಲಿ ಜನಜಂಗುಳಿ ಹೆಚ್ಚಾಗುತ್ತಿದ್ದಂತೆಯೇ, ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟರಮಣಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿದರು.