ಬಂಗಾರಪೇಟೆ: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಸೇವೆ ಎಲ್ಲರಿಗೂ ಸ್ಫೂರ್ತಿ ಎಂದು ಶಿಕ್ಷಕ ಕೆ.ಜಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಬಸವೇಶ್ವರ ಸ್ವಾಮಿ ದೇಗುಲದ ಮುಂದೆ ಶ್ರೀಮತಿ ಅಕ್ಕಚ್ಚಮ್ಮ ಶ್ರೀಬಿ.ಎಸ್. ನಂಜುಂಡಯ್ಯ ವೀರಶೈವ ಕಲ್ಯಾಣ ಮಂಟಪ ಟ್ರಸ್ಟ್ ಹಾಗೂ ವೀರಶೈವ ಸಮಾಜದಿಂದ ಏರ್ಪಡಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 114ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎ.ಎನ್. ಸದಾಶಿವಯ್ಯ, ಟ್ರಸ್ಟ್ ಅಧ್ಯಕ್ಷೆ ಶಾಂತ ಕುಮಾರಿ, ಸಮಾಜದ ಯುವ ಮುಖಂಡ ಮಹೇಶ್ ಅವರು ಶಿವಕುಮಾರ ಸ್ವಾಮೀಜಿ ಅವರ ಸೇವೆ, ದಾಸೋಹ ಕಾರ್ಯ ಸ್ಮರಿಸಿದರು. ಪ್ರದೀಪ್, ಸಂಗಮೇಶ, ಪ್ರಮೋದ್, ಗೋಟ್ಯಾಳ್, ಲೋಕೇಶ್, ಉಪಸ್ಥಿತರಿದ್ದರು.