ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಕಾಯಕಲ್ಪ ನೀಡಲು ಸಲಹೆ

Last Updated 30 ಅಕ್ಟೋಬರ್ 2020, 10:49 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಕೆರೆ ಸಂಸ್ಕೃತಿಯ ಪುನರುಜ್ಜೀವನ ಇಂದಿನ ಅಗತ್ಯವಾಗಿದೆ. ನದಿ, ನಾಲೆಗಳಿಲ್ಲದ ಬಯಲುಸೀಮೆಯ ಕೆರೆಗಳಿಗೆ ಸರ್ಕಾರ ಕಾಯಕಲ್ಪ ಕಲ್ಪಿಸಬೇಕಿದೆ’ ಎಂದು ತಾಲ್ಲೂಕು ಹಸಿರು ಹೊನ್ನು ಬಳಗದ ಅಧ್ಯಕ್ಷ ರಾಜಾರೆಡ್ಡಿ ಹೇಳಿದರು.

ತಾಲ್ಲೂಕಿನ ಯರ್ರಂವಾರಿಪಲ್ಲಿ ಗ್ರಾಮದ ಸಮೀಪ ತಿರುಮಲ ನಾಯಕನ ಕೆರೆಗೆ ಗುರುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾದಂತೆ ಕೆರೆಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕೆರೆಗಳಲ್ಲಿ ಹೂಳು ತುಂಬಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿವೆ. ಕಟ್ಟೆ ಹಾಗೂ ತೂಬುಗಳು ಶಿಥಿಲವಾಗಿವೆ ಎಂದು ಹೇಳಿದರು.

ಅಪರೂಪಕ್ಕೆ ಈ ವರ್ಷ ಉತ್ತಮ ಮಳೆಯಾಗಿದೆ. ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಹಾಗಾಗಿ ಗಂಗೆಗೆ ಕೃತಜ್ಞತಾಪೂರ್ವಕವಾಗಿ ಬಾಗಿನ ಅರ್ಪಿಸಲಾಗಿದೆ. ಇದು ನೀರನ್ನು ಪೂಜ್ಯ ಭಾವನೆಯಿಂದ ನೋಡುವ ಪರಿಯಾಗಿದೆ ಎಂದು ಹೇಳಿದರು.

ಮುಖಂಡರಾದ ವೈ.ಆರ್‌. ಶ್ರೀನಾಥ್, ಕೆ.ವಿ. ವೆಂಕಟಶಿವ, ಟಿ.ಕೆ. ನರಸಿಂಹಪ್ಪ, ಜೆ.ಆರ್‌ .ಶಿವಾರೆಡ್ಡಿ, ಶಂಕರಪ್ಪ, ಗಿರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT