‘ನನಗೆ 5 ಹೆಣ್ಣು ಮಕ್ಕಳಿದ್ದು, ಜೀವನ ನಿರ್ವಹಣೆಗೆ ತುಂಬಾ ಸಮಸ್ಯೆಯಾಗಿದೆ. ಈ ಕಾರಣಕ್ಕೆ ಜಮೀನು ಮಾರಾಟಕ್ಕೆ ಇಟ್ಟಿದ್ದು, ಖರೀದಿದಾರರು ಜಮೀನಿನ ದಾಖಲೆಪತ್ರ ಕೇಳಿದ್ದಾರೆ. ಹೀಗಾಗಿ ದಾಖಲೆಪತ್ರ ಕೋರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ 6 ತಿಂಗಳಾಗಿದೆ. ಭೂದಾಖಲೆಗಳ ವಿಭಾಗದ ಸಿಬ್ಬಂದಿಗೆ ಲಂಚ ಸಹ ಕೊಟ್ಟಿದ್ದೇನೆ. ಆದರೂ ಮ್ಯೂಟೇಶನ್ ಕೊಡದೆ ಸತಾಯಿಸುತ್ತಿರುವ ಸಿಬ್ಬಂದಿ ಪ್ರತಿ ಬಾರಿ ನಾಳೆ ಬಾ ಎಂದು ಹೇಳುತ್ತಾರೆ. ಸಿಬ್ಬಂದಿಯ ವರ್ತನೆಯಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದೆ’ ಎಂದು ನಾರಾಯಣಸ್ವಾಮಿ ಅಳಲು ತೋಡಿಕೊಂಡರು.