ನಂಗಲಿ: ಅಂಬ್ಲಿಕಲ್ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸಿದ್ದನಹಳ್ಳಿ ಗ್ರಾಮದ ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಬಣದ ಕೆ.ಎನ್. ಕಲ್ಯಾಣಿ ನಾಗರಾಜ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿದ್ದ ಪೂಜಾ ಚಲಪತಿ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಳ ಒಪ್ಪಂದದಂತೆ ಹತ್ತು ತಿಂಗಳ ನಂತರ ಅಧಿಕಾರವನ್ನು ಕಲ್ಯಾಣಿ ಅವರಿಗೆ ಬಿಟ್ಟು ಕೊಡುವಂತೆ ಮಾತುಕತೆ ನಡೆದಿತ್ತು. ಹಾಗಾಗಿ, ಮುಂದಿನ ಎಂಟು ತಿಂಗಳ ಅವಧಿಗೆ ಕಲ್ಯಾಣಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್, ನಡುಂಪಲ್ಲಿ ಎನ್. ರಾಮಾಂಜಿ, ಸುಹಾಸ್ ವೆಂಕಟರವಣಪ್ಪ, ಬಾಳಸಂದ್ರ ತಿಮ್ಮರಾಯಪ್ಪ, ಪಿಡಿಒ ವಿ. ಕೃಷ್ಣಪ್ಪ ಹಾಗೂ ಸದಸ್ಯರು ಹಾಜರಿದ್ದರು.