ಸವಾಲು ಮೆಟ್ಟಿ ನಿಲ್ಲಿ: ‘ಯುವಕ ಯುವತಿಯರಿಗೆ ಸಮಾಜದಲ್ಲಿನ ಸರಿ, ತಪ್ಪುಗಳನ್ನು ಅರ್ಥ ಮಾಡಿಸಿ ಸರಿ ದಾರಿಗೆ ತರುವ ಕೆಲಸ ಆಗಬೇಕು. ಭಯದ ವಾತಾವರಣದಲ್ಲಿರುವ ಸಾಹಿತ್ಯಾಸಕ್ತರು ಓದಿನ ಮೂಲಕ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಪರಿವರ್ತನೆ ಮತ್ತು ಹೊಸ ಆಲೋಚನೆಯು ಓದಿನ ಮುಖ್ಯ ಉದ್ದೇಶಗಳಾಗಿವೆ’ ಎಂದು ಜಿಲ್ಲಾ ಕನ್ನಡ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.