ಬೂಸಾಲಕುಂಟೆ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿತರು ಪತ್ತೆಯಾದ ಕಾರಣ ಜಿಲ್ಲಾಡಳಿತವು ಇಡೀ ಬಡಾವಣೆಯನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್ಮೆಂಟ್ ಝೋನ್) ಘೋಷಿಸಿತ್ತು. ಅಲ್ಲದೇ, ಬಡಾವಣೆಯ ಜನರು ಹೊರ ಹೋಗದಂತೆ ಮತ್ತು ಹೊರಗಿನ ವ್ಯಕ್ತಿಗಳು ಬಡಾವಣೆಗೆ ಬಾರದಂತೆ ಆದೇಶಿಸಿ ಸೀಲ್ಡೌನ್ ಮಾಡಿತ್ತು. ಇದೇ ಬಡಾವಣೆಯ ಅಯೂಬ್ ಅವರು ಹೊರ ಹೋಗಿ ಮೃತಪಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.