ಗ್ರಾಮದ ರೈತರೊಬ್ಬರ ಜಮೀನಿಗೆ ಹೋಗಿದ್ದ ಮಾಲಾ ಕೃಷಿ ಹೊಂಡದ ಬಳಿ ನಿಂತು ಮೊಬೈಲ್ನಲ್ಲಿ ಟಿಕ್–ಟಾಕ್ ಮಾಡುವ ಯತ್ನದಲ್ಲಿ ಆಯತಪ್ಪಿ ಕೃಷಿ ಹೊಂಡದೊಳಗೆ ಬಿದ್ದಿದ್ದಾರೆ. ಅವರಿಗೆ ಈಜು ಬಾರದ ಕಾರಣ ಹೊರ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂಜೆಯಾದರೂ ಮಾಲಾ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪೋಷಕರು ಜಮೀನಿನ ಬಳಿ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.