‘ಚಲ್ದಿಗಾನಹಳ್ಳಿ ಕೆಳ ಸೇತುವೆ ಸಮೀಪದ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ. ಹಾಗಾಗಿ, ಕೆರೆ ಸೇರಬೇಕಾದ ಮಳೆ ನೀರು ರೈಲ್ವೆ ಕೆಳಸೇತುವೆ ಕೆಳಗೆ ಸಂಗ್ರಹವಾಗುತ್ತದೆ. ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಸಮಸ್ಯೆ ಮುಂದುವರಿದಿದೆ’ ಎಂದು ರೈಲ್ವೆ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.